ಆ.14: ಕಳೆಂಜ ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ

Suddi Udaya

ಕಳೆಂಜ : ಕಳೆಂಜ ವಿಶ್ವಹಿಂದೂ ಪರಿಷತ್, ಬಜರಂಗದಳ ಗ್ರಾಮ ಸಮಿತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಮತ್ತು ಧ್ವಜಾರೋಹಣ ಆ.14ರಂದು ಕಾಯರ್ತ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪ್ಪಯ್ಯ ಗೌಡ ನಡುಜಾರು ವಹಿಸಲಿದ್ದಾರೆ. ದಿಕ್ಕೂಚಿ ಭಾಷಣವನ್ನು ಪುತ್ತೂರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾಡಲಿದ್ದಾರೆ. ಧ್ವಜಾರೋಹಣವನ್ನು ಕಳೆಂಜ- ಕಾಂತ್ರೆಳ್ ನಿವೃತ್ತ ಸುಬೆದರ್ ಮಹಾಬಲ ಕೆ. ನೆರವೇರಿಸಲಿದ್ದಾರೆ. ಮಂಗಳೂರು ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ಉಮಾಮಹೇಶ್ವರ ದೇವಸ್ಥಾನ ಕಾಯರ್ತಡ್ಕ ಅಧ್ಯಕ್ಷ ಆನಂದ ಗೌಡ ಮರಕ್ಕಡ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖ್ ತಿಳಿಸಿದ್ದಾರೆ.

Leave a Comment

error: Content is protected !!