July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಡಿರುದ್ಯಾವರ ಹರ್ಷಿತ್ ನೇಮಕ

ಕಡಿರುದ್ಯಾವರ: ಇಲ್ಲಿಯ ಹೊಸಮನೆ ಹರ್ಷಿತ್ ರವರು ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.


ಹರ್ಷಿತ್‌ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಿರುದ್ಯಾವರ ಗ್ರಾಮದ ಕೊಡಿಯಾಲ್‌ಬೈಲ್ ಶಾಲೆಯಲ್ಲಿ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಎಸ್‌ಡಿಎಂ (ಕನ್ನಡ) ಉಜಿರೆಯಲ್ಲಿ, ಪಿ.ಯು ಶಿಕ್ಷಣವನ್ನು ಎಸ್.ಡಿ.ಎಂ ಉಜಿರೆಯಲ್ಲಿ, ಉಜಿರೆ ಎಸ್‌ಡಿಎಂ ನಲ್ಲಿ ಇಂಜಿನಿಯರಿಂಗ್ ಮಾಡಿ 2022 ರಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ 2024 ಜನವರಿಯಲ್ಲಿ 6 ತಿಂಗಳ ತರಬೇತಿಗಾಗಿ ರಾಜಸ್ಥಾನದ ಅಲ್ವರ್‌ಗೆ ತೆರಳಿದರು. ಇದೀಗ ತರಬೇತಿ ಮುಗಿಸಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇವರು ಕಡಿರುದ್ಯಾವರ ಗ್ರಾಮದ ಹೊಸಮನೆ ರಾಮಚಂದ್ರ ಗೌಡ ಮತ್ತು ಜಯಂತಿ ದಂಪತಿಯ ಪುತ್ರ.

Related posts

ಉಜಿರೆ ಬ್ಯಾಂಕ್ ಆಫ್ ಬರೋಡದಿಂದ ಕೆಮ್ಮಟೆ ಶಾಲಾ ಮಕ್ಕಳಿಗೆ ಆಟೋಟ ವಸ್ತುಗಳ ಕೊಡುಗೆ

Suddi Udaya

ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಧರೆಗುರುಳಿದ 33 ಕೆವಿ ವಿದ್ಯುತ್ ಟವರ್ ದೊಂಡೋಲೆ ಪವರ್ ಪ್ರಾಜೆಕ್ಟ್ ನವರಿಗೆ ಸೇರಿದ ಕಾರು – ಬೈಕ್ ಜಖಂ: ಕಾರಿನೊಳಗೆ ಇದ್ದ ‌ಪವರ್ ಪ್ರಾಜೆಕ್ಟ್ ನ ಸಿಬ್ಬಂದಿ ಗಣೇಶ್ ಅಪಾಯದಿಂದ ಪಾರು

Suddi Udaya

ತೆಂಕಕಾರಂದೂರು: ಶ್ರೀರಾಗ ಸಂಗೀತ ಶಾಲೆ ಶುಭಾರಂಭ

Suddi Udaya

ಬಂದಾರು: ಮುರ್ತಾಜೆಯಲ್ಲಿ ರಸ್ತೆ ಕುಸಿತ; ಸಂಪರ್ಕ ಕಡಿತ

Suddi Udaya

ಬಂದಾರು: ಮೈರೋಳ್ತಡ್ಕ ಸ.ಉ. ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!