24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಸಂಘ-ಸಂಸ್ಥೆಗಳು

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

ಉಜಿರೆ : ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆ.15 ರಂದು ಉಜಿರೆ ಸೌತ್ ಪ್ಯಾಲೆಸ್ ಹೋಟೆಲ್ ಬಳಿ ನಡೆಯಿತು.

ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಧ್ವಜಾರೋಹಣ ನಡೆಸಿದರು. ಉಜಿರೆ ಯು.ಎಸ್. ಅಟೋ ಚಾಲಕರ- ಮಾಲಕರ ಸಂಘದ ಅಧ್ಯಕ್ಷ ಲತೀಫ್ ಯು.ಎಚ್. ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಅಬ್ದುಲ್ ರಝಕ್ ಸುಪ್ರೀಂ ಸೆಂಟರ್ ಉಜಿರೆ, ಶಿವಕಾಂತ ಎಸ್.ಪಿ. ಆಯಿಲ್ ಮಿಲ್ ಉಜಿರೆ, ಪ್ರಶಾಂತ್ ಜೈನ್ ಅಮೃತ್ ಸಿಲ್ಕ್ಸ್ ಉಜಿರೆ, ಆಸೀಫ್ ಅತ್ತಾಜೆ, ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಸುಬ್ರಹ್ಮಣ್ಯ ಹಾಂಗ್ಯೋಐಸ್ ಕ್ರೀಮ್ ಉಜಿರೆ, ಸುಬ್ರಹ್ಮಣ್ಯ ಮನೋಹರ್ ಇಲೆಕ್ಟ್ರಾನಿಕ್ ಉಜಿರೆ, ಫಾರೂಕ್ ಹೋಟೆಲ್ ಸೌತ್ ಪ್ಯಾಲೆಸ್ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಗಳಾಗಿ ಉಜಿರೆ ವಲಯ ಬಿ.ಎಂ.ಎಸ್. ಅಟೋ ಚಾಲಕರ – ಮಾಲಕರ ಸಂಘದ ಅಧ್ಯಕ್ಷ ಉಮೇಶ್ ಅತ್ತಾಜೆ, ಸೂರಪ್ಪ ಗಾಂಧಿನಗರ, ದಿನೇಶ್, ಅಣ್ಣು, ಸಲೀಂ ಕುಂಟಿನಿ, ಪ್ರದೀಪ್, ಝಕರಿಯಾ, ದಿವಾಕರ ಹೆಗ್ಡೆ ಭಾಗವಹಿಸಿದ್ದರು. ಹಾಗೂ ಯು.ಎಸ್. ಅಟೋ ಚಾಲಕರ – ಮಾಲಕರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ಕು. ಅನನ್ಯ ಭಟ್ ಉಜಿರೆ ದೇಶ ಭಕ್ತಿ ಗೀತೆ ಹಾಗೂ ಜನಾರ್ಧನ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಗೀತೆಯನ್ನು ಹಾಡಿದರು.

Related posts

ಸೌಜನ್ಯ ಪ್ರಕರಣ ಮರು ತನಿಖೆ ಕೋರಿದ ಅರ್ಜಿ: ಸರಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ

Suddi Udaya

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

Suddi Udaya

ಧರ್ಮಸ್ಥಳದಲ್ಲಿ ವಿಜಯದಶಮಿ ಪ್ರಯುಕ್ತ ತೆನೆಹಬ್ಬ ಆಚರಣೆ

Suddi Udaya

ಬೆಳ್ತಂಗಡಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ರಚನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀ 47ನೇ ಜೆಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!