ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಪುಂಜಾಲಕಟ್ಟೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರಾಥಮಿಕ ವಿಭಾಗದಲ್ಲಿ 78ನೆಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ರಾಷ್ಟ್ರ ಧ್ವಜಾರೋಹಣವನ್ನು ಶ್ರೀಧರ ಭಟ್ ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಪಾರೆಂಕಿ ಇವರು ನೆರವೇರಿಸಿದರು .ಸಮಾರಂಭದಲ್ಲಿ ಮಡಂತ್ಯಾರ್ ಪಂಚಾಯತ್ ಸದಸ್ಯ ವಿಶ್ವನಾಥ , ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಗೋವರ್ಧನ ಬಾಳಿಗ, ಸುಧಾಕರ ಪ್ರಭು, ಮೋಹನ್ ಪ್ರಭು, ಅಶೋಕ್ ಗುಂಡಿಯಲ್ಕೆ, ಜಯಪ್ರಕಾಶ್, ಸುನಿಲ್ ಕುಮಾರ್ ,ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ದಿವಾಕರ್ ಶೆಟ್ಟಿ, ಮನೋಹರ್, ಯೋಗಿಶ್ ಆಚಾರ್ಯ ,ಶ್ರೀಮತಿ ಚೇತನ ಶ್ರೀಮತಿ ಸುಮಿತ್ರ ,ಶ್ರೀಮತಿ ಸೌಮ್ಯ ಹೆಗ್ಡೆ, ಶಾಲಾ ಪೋಷಕರು ಶಾಲಾ ಅಭಿಮಾನಿಗಳು ಮತ್ತು ದಾನಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಾದ ಕರುಣಾಕರ ಯನ್ ಸ್ವಾಗತಿಸಿ ,ಶಿಕ್ಷಕಿ ಶ್ರೀಮತಿ ಜಯಶ್ರೀ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ, ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಶ್ರಮಿಸಿದರು.

Leave a Comment

error: Content is protected !!