ಖಿಲ್ರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ: ಖಿಲ್ರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರ ಬೆಳ್ತಂಗಡಿ ವತಿಯಿಂದ ಆ.15 ರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಬಿ,ಎ,ನಝೀರ್ ನೆರವೇರಿಸಿದರು.

ದಾರುಸ್ಸಲಾಂ ಇದರ ಉಪ ಚೇರ್ಮನ್ ಜೆಫ್ರಿ ತ್ವಾಹ ತಂಙಳ್ ರವರು ದುವಾ ನೆರವೇರಿಸಿದರು. ಖತೀಬರಾದ ಹನೀಫ್ ಫೈಝೀ ಸಂದೇಶ ಭಾಷಣ ಮಾಡಿದರು. ಅತಿಥಿಗಳಾಗಿ ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಹನೀಫ್ ವರ್ಷಾ,ಕೋಶಾಧಿಕಾರಿ ಇಸ್ಮಾಲಿ ಐ,ಬಿ, ಅಬ್ಬಾಸ್ ಹಂಝಾ, ಮಹಮ್ಮದ್ ಕುದ್ರಡ್ಕ, ಅಶ್ರಫ್ ಮುಹಲ್ಲಿಮು, ರಿಝ್ವಾನ್ ಬಿ,ಕೆ,ಸಿದ್ದೀಕ್ ಮಟ್ಲ ಉಪಸ್ಥಿತರಿದ್ದರು ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ರಹಮಾನ್ ಮುಸ್ಲಿಯಾರ್ ವಂದಿಸಿದರು.

Leave a Comment

error: Content is protected !!