ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಬೆಳ್ತಂಗಡಿ : ನಾಳ ಅಂಗನವಾಡಿ ಕೇಂದ್ರದ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ಆ.15 ರಂದು ಜರುಗಿತು.
ಸ್ಥಳೀಯ ಹಿರಿಯರಾದ ಪುರಂದರ ರೈ ನಾಳ ಧ್ವಜಾರೋಹಣ ನೆರವೇರಿಸಿದರು.

ರಾಜೇಶ್ ಪೆಂರ್ಬುಡ ಮಾತನಾಡುತ್ತಾ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತದ ದೇಶದ ಪ್ರಮುಖ ಸ್ಥಾನ ಪಡೆದಿದೆ.ವಿಪರ್ಯಾಸವೆಂದರೆ ಭಯೋತ್ಪಾದಕ ಸಂಘಟನೆಗಳು ನಮ್ಮ ದೇಶದಕ್ಕೆ ಕಂಟಕವಾಗಿದೆ.ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಅಭಿವೃದ್ಧಿಗೆ ಕೈಜೋಡಿಸಿದಾಗ ಮಾತ್ರ ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶದ ಭವಿಷ್ಯಕ್ಕೆ ಜಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.


ಮಮತಾ ಆಳ್ವ ನಾಳ, ಸುಗುಣ ಆಳ್ವ ನಾಳ, ಇಸ್ಮಾಯಿಲ್ ಪಲ್ಲಾದೆ, ಸೋಮಪ್ಪ ಗೌಡ ಕುಬಾಯ, ಲೋಕೇಶ್ ನಾಳ, ಭವಾನಿ ಅಧ್ಯಕ್ಷರು ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್ ನಾಳ,ತಸ್ನೀಮ ಶಮೀರ್,ನೀಲಯ್ಯ ಪೂಜಾರಿ,ದಿನೇಶ್ ಗೌಡ ಬಿ,ಮಕ್ಕಳ ಪೋಷಕರು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸ್ವಾಗತಿಸಿ, ವಂದಿಸಿದರು. ಸಹಾಯಕಿ ಮೋಹಿನಿ ಸಹಕರಿಸಿದರು.

Leave a Comment

error: Content is protected !!