ಕನ್ಯಾಡಿ-2 ಅಂಗನವಾಡಿ ಕೇಂದ್ರದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ : ಕನ್ಯಾಡಿ-2 ಅಂಗನವಾಡಿ ಕೇಂದ್ರದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮವು ಆ.13 ರಂದು ನಡೆಸಲಾಯಿತು.

ಈ ವೇಳೆ ಅಂಗನವಾಡಿ ಸ್ವಚ್ಛತೆ ಹಾಗೂ ಮಕ್ಕಳು ಕುಡಿಯುವ ನೀರಿನ ಟ್ಯಾಂಕಿಯನ್ನು ಸ್ವಚ್ಛ ಮಾಡಲಾಯಿತು. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಧರ್ಮಸ್ಥಳದ 11 ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಧರ್ಮಸ್ಥಳ ವಲಯದ ಮೇಲ್ವಿಚಾರಕರಾದ ರವೀಂದ್ರ , ಸೇವಾಪ್ರತಿನಿಧಿ ಸುಜಾತ , ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಸುವರ್ಣ ಮತ್ತು ವಸಂತ ನಾಯ್ಕ್ ಭೇಟಿ ನೀಡಿ ಸಹಕರಿಸಿದರು.

ಇದರೊಂದಿಗೆ ಘಟಕದ ಮಾಸಿಕ ಸಭೆಯನ್ನು ನಡೆಸಲಾಯಿತು. ಘಟಕದ ಸ್ವಯಂ ಸೇವಕಿಯಾದ ಪ್ರಿಯಾ, ರವರು ಸ್ವಾಗತವನ್ನು ನೀಡಿದರು ಸ್ವಯಂಸೇವಕರಾದ ನೀಲಧರ ಶೆಟ್ಟಿ ಎಲ್ಲರಿಗೂ ಧನ್ಯವಾವಿತ್ತರು.


Leave a Comment

error: Content is protected !!