ಬರೆಂಗಾಯ ಶ್ರೀ ವನದುರ್ಗಾ ಮಾತೃ ಮಂಡಳಿ ವತಿಯಿಂದ ವರಮಹಾಲಕ್ಷ್ಮಿ ಪೂಜೆ

Suddi Udaya

ನಿಡ್ಲೆ: ಬರೆಂಗಾಯ ಶ್ರೀ ವನದುರ್ಗಾ ಮಾತೃ ಮಂಡಳಿ ವತಿಯಿಂದ ವರ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಆ.16 ರಂದು ನಾಗವೇಣಿ ಸಭಾ ಭವನ ಕಲ್ಕುಡ ಗುಡ್ಡೆ ಯಲ್ಲಿ ನೆರವೇರಿತು.

ವರಮಹಾಲಕ್ಷ್ಮಿ ಪೂಜಾ ಮಹತ್ವವನ್ನು ಕಡಬ ತಾಲೂಕಿನ ಪೂರ್ಣಿಮಾ ರವರು ತಿಳಿಸಿಕೊಟ್ಟರು. ವೇದವತಿ ಜನಾರ್ಧನ್ ನಿರೂಪಿಸಿ, ಮಾತೃ ಮಂಡಳಿ ಅಧ್ಯಕ್ಷೆ ಚಂದ್ರವತಿ ಕಾಟ್ಲಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!