ಆ.21 : ಅಳದಂಗಡಿ ಸೋಮನಾಥೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ನಾಲ್ಕೆತ್ತು ಕಂಬಳ

Suddi Udaya

ಅಳದಂಗಡಿ: ಅಳದಂಗಡಿ ಅರಮನೆ ವ್ಯಾಪ್ತಿಯ ನಾಲ್ಕೆತ್ತು ಕಂಬಳ ಆ.21ರಂದು ನಡೆಯಲಿದೆ ಎಂದು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ.

ಅಳದಂಗಡಿ ಅಜಿಲ ಸೀಮೆ ವ್ಯಾಪ್ತಿಯಲ್ಲಿ ಸಾಗುವಳಿಯ ಆರಂಭದ ಅಂಗವಾಗಿ ಅಳದಂಗಡಿ ಸೋಮನಾಥೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ನಾಲ್ಕೇತ್ತು ಕಂಬಳ ನಡೆಯುವುದು
ತುಳುನಾಡಿನ ವಿಶೇಷತೆ ಯಲ್ಲಿ ಒಂದಾಗಿದೆ. ಈ ಕಟ್ಟುಪಾಡು ತುಳುನಾಡಿನಲ್ಲಿ ಕೆಲವೇ ಕಡೆಗಳಲ್ಲಿ ನಡೆಯುತ್ತಿದೆ. ದೇವರ ಗದ್ದೆಯಲ್ಲಿ ನಾಲ್ಕೆತ್ತು ಕಂಬಳ ನಡೆದ ನಂತರವೇ ಸೀಮೆ ವ್ಯಾಪ್ತಿಯಲ್ಲಿ ಗದ್ದೆಯಲ್ಲಿ ಬೇಸಾಯ ಆರಂಭಿಸುವುದು ಮೂತ೯ವಾಗಿದೆ ಈ ಕಂಬಳರ ವಿಶೇಷತೆಯಾಗಿದೆ.
ಈ ಪವಿತ್ರ ಕಾಯ೯ಕ್ರಮವನ್ನು ಸೀಮೆಯ ಗುರಿಕಾರರು, ಸೀಮೆಯ ಭಕ್ತರು ಅರಮನೆಯ ಪಟ್ಟದ ಚಾವಡಿಯಲ್ಲಿ ಚಾವಡಿ ನಾಯಕರು, ಆಸ್ರಣ್ಣರು, ಗುರಿಕಾರರು, ನಿಧಾ೯ರ ಮಾಡಿದಂತೆ ಕಾಯ೯ಕ್ರಮ ನಡೆಯುತ್ತಿದೆ.

Leave a Comment

error: Content is protected !!