ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ

Suddi Udaya

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಯ ಸಭೆಯು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಆ.18 ರಂದು ನಡೆಯಿತು.

ಮೇಲ್ವಿಚಾರಕರಾದ ದಮಯಂತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಲಯದಲ್ಲಿ ಒಟ್ಟು 15 ಭಜನಾ ಮಂಡಳಿಗಳಿದ್ದು ಇದರಲ್ಲಿ ಒಬ್ಬರು ಸಂಚಾಲಕರು ಹಾಗೂ 5 ಮಂದಿ ಪದಾಧಿಕಾರಿಗಳ ಅಯ್ಕೆ ಮಾಡುವ ಬಗ್ಗೆ ತಿಳಿಸಿದರು. ನಂತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಸಂತೋಷ್ ಮರ್ದೋಟ್ಟು, ಅಧ್ಯಕ್ಷರಾಗಿ ರಾಜು ಪೂಜಾರಿ, ಉಪಾಧ್ಯಕ್ಷರಾಗಿ ಸುಧಾಕರ, ಕಾರ್ಯದರ್ಶಿ ಹರೀಶ್ ಯನ್, ಜತೆ ಕಾರ್ಯದರ್ಶಿ ಅಕ್ಷಯ್, ಕೋಶಾಧಿಕಾರಿಯಾಗಿ ಚಂದ್ರ ಶೇಖರ ರಾವ್ , ಹಾಗೂ ಯೋಗೀಶ್ ಆಚಾರ್ಯ, ಇವರನ್ನು ಭಜನಾ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು. ನಾರಾವಿ ಸೇವಾ ಪ್ರತಿನಿಧಿ ರೇಷ್ಮಾ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿದರು. ಸಭೆಯ ಕೊನೆಗೆ ಕೊಕ್ರಾಡಿ ಸಾವ್ಯ ಸೇವಾಪ್ರತಿನಿಧಿ ಶಶಿಧರ್ ಕುಲಾಲ್ ಧನ್ಯವಾದವಿತ್ತರು.

Leave a Comment

error: Content is protected !!