ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿ

Suddi Udaya

ಬೆಳ್ತಂಗಡಿ: ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿಯಾಗಿರುವ ಬಗ್ಗೆ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಲಾಗಿದ್ದು ಕೇಸು ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಿಕ್ಷಾ (25) ಮೃತ ದುರ್ದೈವಿ.

ಮಲವಂತಿಗೆ ಗ್ರಾಮದ ಚೆನ್ನೆಗೌಡರ ಮಗಳಾಗಿರುವ ಸುಭಿಕ್ಷಾ ಅವರನ್ನು ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಒಂದು ಗಂಡು ಮಗುವಿದೆ. ಆ.19ರಂದು ಸಂಜೆ 4 ಗಂಟೆಗೆ ಸುಭಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಡ ಪ್ರವೀಣ್‌, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮಗಳಿಗೆ ವರದಕ್ಷಿಣೆ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿ ನೀಡಿದ ದೂರಿನಂತೆ. ಸುಭೀಕ್ಷಾ ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!