ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ

Suddi Udaya

ಕೊಟ್ಟಿಗೆಹಾರ : ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಬೀಸಿದ ಮಳೆಗೆ ನೀರು ರಸ್ತೆಯ ಮೇಲೆ ಸಾಗಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡಿದರು.2019 ರಲ್ಲಿ ಗುಡ್ಡ ಕುಸಿತವಾದ ಸಂದರ್ಭದಲ್ಲಿ ಸುರಿದ ಮಳೆಯಂತೆ ಧಾರಾಕಾರ ಮಳೆ ಮಂಗಳವಾರ ಸುರಿದಿದ್ದರಿಂದ ಘಾಟ್ ರಸ್ತೆಯಲ್ಲಿ ವಾಹನದ ಚಕ್ರಗಳು ನೀರಿನಲ್ಲಿ ಮುಳುಗಿದಂತೆ ಭಾಸವಾಯಿತು.ಚಾರ್ಮಾಡಿ ಘಾಟಿಯಲ್ಲಿ ಮಳೆಯ ಆರ್ಭಟಕ್ಕೆ ಗುಡ್ಡದ ಮೇಲಿದ್ದ ಬಂಡೆಗಳು ರಸ್ತೆಗೆ ಬಂದು ಬಿದ್ದಿವೆ.ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ

.

Leave a Comment

error: Content is protected !!