ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಾದ ಸತೀಶ್ ಸಾಲುಮರ ಮತ್ತು ನವಾಜ್ ಸಾಲುಮರ ಇವರು ಮಡಂತ್ಯಾರು ಬಳ್ಳಮಂಜ ರಸ್ತೆಯ ಅಪಾಯಕಾರಿ ಹೊಂಡಗಳನ್ನು ಕಲ್ಲು ಮಣ್ಣು ಹಾಕಿ ಮುಚ್ಚಿ ಸಾರ್ವಜನಿಕರಿಗೆ ವಾಹನ ಓಡಾಡಲು ಅನುಕೂಲ ಮಾಡಿ ಕೊಟ್ಟರು.

ಈ ರಸ್ತೆಯಲ್ಲಿ ಇತ್ತೀಚಿಗೆ ರಸ್ತೆ ಅಪಘಾತಗಳು ಅತಿಯಾಗುತ್ತಿದ್ದು ಇದನ್ನು ಮನಗಂಡು ತಮ್ಮ ರಿಕ್ಷಾದಲ್ಲಿ ಕಲ್ಲುಗಳನ್ನು ಹೊತ್ತು ತಂದು ತಮ್ಮ ಸಮಾಜ ಸೇವೆಯನ್ನು ಮಾಡಿದರು. ಸಾರ್ವಜನಿಕರು ಇವರ ಕೆಲಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ: ಹರ್ಷ ಬಳ್ಳಮಂಜ

Leave a Comment

error: Content is protected !!