23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ.31: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಆ.24 ರಂದು ನಡೆಯಬೇಕಿದ್ದ ಕೃಷ್ಣ ವೇಷ ಸ್ಪರ್ಧೆಯು ಕಾರಣಾಂತರದಿಂದ ಆ.31 ರಂದು ಮಧ್ಯಾಹ್ನ 2.00 ಕ್ಕೆ ನಡೆಯಲಿದೆ.

ಸ್ಪರ್ಧೆಯಲ್ಲಿ ಮುದ್ದು ಕೃಷ್ಣ 0-3 ವರ್ಷ, ಬಾಲ ಕೃಷ್ಣ 4-7 ವರ್ಷ, ರಾಧಾ ಕೃಷ್ಣ 8-12 ವರ್ಷದ ಮಕ್ಕಳಿಗೆ ಮಾತ್ರ ಅವಕಾಶ. ಸ್ಪರ್ಧಾ ನೋಂದಾವಣೆಗೆ ಆಗಸ್ಟ್ 29 ಕೊನೆಯ ದಿನಾಂಕವಾಗಿದೆ.

ಸ್ಪರ್ಧೆಯ ನಿಬಂಧನೆಗಳು: ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಅವಕಾಶ. ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜಾರಿರಬೇಕು. ನೋಂದಾವಣೆ ಸಮಯ ಆಧಾರ್ ಕಾರ್ಡ್ ಕಡ್ಡಾಯ. ಪ್ರತೀ ವಿಭಾಗದಲ್ಲೂ ಸ್ಪರ್ಧಿಗಳಿಗೆ 1-2 ನಿಮಿಷದ ಸಮಯಾವಕಾಶ ನೀಡಲಾಗುವುದು. ಸ್ಪರ್ಧೆಗೆ ಬೇಕಾದ ವೇಷಭೂಷಣ ಮತ್ತು ಹಾಡನ್ನು ತಾವೇ ತಯಾರಿ ಮಾಡಿಕೊಂಡು ಬರತಕ್ಕದ್ದು. ವೇಷಭೂಷಣ, ಹಾವ-ಭಾವಗಳನ್ನು ತೀರ್ಪುಗಾರಿಕೆಗೆ ಪರಿಗಣಿಸಲಾಗುವುದು. ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಎಲ್ಲಾ ಸ್ಪರ್ಧಿಗಳ ಫೋಟೊ/ ವೀಡಿಯೋವನ್ನು ಮುಳಿಯ ಫೇಸ್‌ಬುಕ್ ಪೇಜ್ ನಲ್ಲಿ ಹಾಕಲಾಗುವುದು.

ನೋಂದಾವಣೆಗಾಗಿ – 9343004916 / 87925 30916

Related posts

ಡಿ.17: ಬೆಳ್ತಂಗಡಿ ತಾಲೂಕಿನ 18ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ.ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

Suddi Udaya

ಮೊಗ್ರು ಸರಕಾರಿ ಶಾಲೆಯಲ್ಲಿ ಆಂ.ಮಾ. ಶಿಕ್ಷಣ ನೀಡಲು ಅನುಮತಿ: ಟ್ರಸ್ಟ್ ನ ಪ್ರಯತ್ನ | ಶಾಸಕರ ಸಾಥ್ | ಸರಕಾರದ ನಿರ್ಧಾರ

Suddi Udaya

ಇಲಾಖಾ ಅಧಿಕಾರಿಗಳು ಗೈರಾದ ಹಿನ್ನಲೆ ಕೊಕ್ಕಡ ಗ್ರಾ.ಪಂ ತ್ರೈಮಾಸಿಕ ಕೆ.ಡಿ.ಪಿ ಸಭೆ ರದ್ದು

Suddi Udaya

ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್‌ಐಟಿಗೆ ದೂರು

Suddi Udaya

ಉಜಿರೆ: ಅರಳಿ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್, ಕಾರ್ಯದರ್ಶಿಯಾಗಿ ಅನಿಲ್‌ ಆಯ್ಕೆ

Suddi Udaya
error: Content is protected !!