September 6, 2026
ಗ್ರಾಮಾಂತರ ಸುದ್ದಿ

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

ರಾಜ ಕೇಸರಿ ಜ್ಞಾನ ರತ್ನ ಪ್ರಶಸ್ತಿ
ರಾಜ ಕೇಸರಿ ಸೇವಾ ರತ್ನ ಬಿರುದು ನೀಡಿ ಗೌರವ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮತ್ತು ಪ್ರಾದೇಶಿಕ ರಕ್ತ ಪೂರ್ಣ ಕೇಂದ್ರ ಸರಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ
ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ. ಮುಗಳಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಾಜ ಕೇಸರಿ ಸಂಘಟನೆಯ ಸಂದೀಪ್ ಬೆಳ್ತಂಗಡಿ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಗುಳಿ ನಾರಾಯಣರಾವ್ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತಿ ಬೆಳ್ತಂಗಡಿ ಉದ್ಘಾಟಿಸಿ ರಾಜ ಕೇಸರಿ ಸಂಘಟನೆ ಬಹಳ ಉತ್ತಮವಾದ ಕಾರ್ಯಕ್ರಮಗಳ ನಿರೂಪಿಸಿಕೊಂಡು ತಾಲೂಕು ಅಲ್ಲದೆ ರಾಜ್ಯದಲ್ಲಿಯೂ ಕೂಡ ಮನೆ ಮಾತಾಗಿದೆ ಎಂದು ಶುಭ ಹಾರೈಸಿದರು
ಮುಖ್ಯ ಅತಿಥಿಗಳಾಗಿಮನೋಹರ್ ಬಳಂಜ ವರದಿಗಾರರು ವಿಜಯವಾಣಿ ಜಯಾನಂದ ಘಟಕ ಅಧಿಕಾರಿ ಗೃಹ ರಕ್ಷಕ ದಳ ಬೆಳ್ತಂಗಡಿ ವಲಯ.
ಸತೀಶ್ ರೈ ಪುಂಡಿಕು ಉದ್ಯಮಿಗಳು ಬೆಳ್ತಂಗಡಿ. ಬಿಕೆ ವಸಂತ್ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರು ದ ಸಂಸ ಅಂಬೇಡ್ಕರ್ ವಾದ, ಕರುಣಾಕರ್ ಬಂಗೇರ ಅಧ್ಯಕ್ಷರು ಜೆಪಿ ಅಟಕರ್ ಬೊಟ್ಟುಗುಡ್ಡೆ, ಶಿವಶಂಕರ್ ಪಿಲಿ ಚಾಮುಂಡಿ ಇಂಜಿನಿಯರ್ ವರ್ಕರ್ಸ್ ಗುರುವಾಯನಕೆರೆ,ಚಾಬಕ್ಕ ಗೌರವ ಸಲಹೆಗಾರರು ಖಾಸಗಿ ಬಸ್ ನೌಕರರ ಸಂಘ, ಸೀತಾರಾಮ್ ಮಾಲಕರು ಎಸ್ ಆರ್ ಬಿ ವೆಲ್ಡಿಂಗ್, ಸುರೇಂದ್ರ ಕೋಟ್ಯಾನ್ ಅಧ್ಯಕ್ಷರು ಟೈಲರ್ ಅಸೋಸಿಯನ್ ಬೆಳ್ತಂಗಡಿ ವಲಯ. ಲೂಸಿ ಲೀನಾ ಮೋರಸ್ ಮುಖ್ಯೋಪಾಧ್ಯಾಯರು ಹಿರಿಯ ಪ್ರಾಥಮಿಕ ಶಾಲೆ ಮುಗಳಿ.,.ಮೋಹನಂದ ಕುಲಾಲ್ ಅಧ್ಯಕ್ಷರು ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಗುರುವಾಯನಕೆರೆ., ವಿಶೇಷ ಅವಹಾನಿತರಾಗಿ ಆಗಮಿಸಿದ..

ಕಲಾ ಮಾಣಿಕ್ಯ ರಾಜೇಶ್ ಕಣ್ಣೂರು
ಖ್ಯಾತ ಚಲನಚಿತ್ರ ನಟಿ ಶೈಲಶ್ರೀ ಮುಲ್ಕಿ ವೇದಿಕೆಯಲ್ಲಿ ಅಲಂಕಾರವನ್ನು ಚಂದಗಾಣಿಸಿಕೊಟ್ಟರು.
ಅದೇ ರೀತಿ ಬಹುದೊಡ್ಡ ರಕ್ತದಾನಿಗಳಾದ
ಗೃಹರಕ್ಷಕ ದಳ ಬೆಳ್ತಂಗಡಿ ಘಟಕ..
ಟೈಲರ್ ಅಸೋಸಿಯನ್ ಬೆಳ್ತಂಗಡಿ ವಲಯ.ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಗುರುವಾಯನಕೆರೆ.
ಜೆ .ಪಿ ಅಟಾಕಾರ್ ಬೂಟುಗುಡ್ಡೆ..
ಖಾಸಗಿ ಬಸ್ ನೌಕರರ ಸಂಘ ಕೈ ಜೋಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಊಟದ ಬಟ್ಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

ಅದೇ ರೀತಿ ಪಿಯುಸಿ ಮತ್ತು ಎಸ್ ಎಲ್ ಸಿ ಯ ಅಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ರಾಜ ಕೇಸರಿ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಊರ ಗಣ್ಯರಾದ. ಸಂಗಮ್ ಸ್ಟೋರ ಇದರ ಮಾಲಕರಾದ ಸಿರಿಯಲ್ ಡಿಸೋಜ.ಮತ್ತು ಉದ್ಯಮಿಗಳಾದ ಸತೀಶ್ ರೈ ಪುಂಡಿಕು ಇವರನ್ನು ರಾಜ ಕೇಸರಿ ಸೇವಾ ರತ್ನ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಊರ ಅಭಿಮಾನಿಗಳು ಬಂದು ಸಹಕರಿಸಿ ರಕ್ತದಾನ ನೀಡಿ ಸಂಘಟನೆಗೆ ಬೆಂಬಲವಾಗಿ ಪ್ರೋತ್ಸಾಹಿಸಿದರು.

Related posts

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಶೌಚಾಲಯ ಮತ್ತು ಸ್ನಾನಗ್ರಹ ನಿರ್ಮಿಸಿ ಹಸ್ತಾಂತರ

Suddi Udaya

ಫೆ.4: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ, ಗಿಫ್ಟ್ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಬಂಟ್ವಾಳದಲ್ಲಿ ನಡೆದ ಕೊಲೆಯತ್ನ ಪ್ರಕರಣ: 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಧಮ೯ಸ್ಥಳದಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya

ಮುಂಡಾಜೆ : ನಿಡಿಗಲ್ ನಿವಾಸಿ, ಗಣೇಶ ಪ್ರಭು ಹೃದಯಾಘಾತದಿಂದ ನಿಧನ

Suddi Udaya
error: Content is protected !!