ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

2024-25 ನೇ ಸಾಲಿನ ಕರಾಯ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಥಮಿಕ ಶಾಲಾ ಬಾಲಕರ ತಂಡ ಫೈನಲ್ ನಲ್ಲಿ ವಿಜಯವನ್ನು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಗೊಂಡು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಭಾಗವಹಿಸಿದ ವಿದ್ಯಾರ್ಥಿಗಳು 7ನೆ ತರಗತಿಯ ಯಜ್ಞೇಶ್, ಕಾರ್ತಿಕ್ ,6 ನೆ ತರಗತಿಯ ರಚನ್,ಆಯುಷ್,ಸಾಕೇತ್, , ಮೊಹಮ್ಮದ್ ಅಫನ್, ಶಮ್ಮಸ್, ಸಾತ್ವಿಕ್, ಅಭಿಷ್, ತ್ರಿತಿಕ್ ಇವರಿಗೆ ಶಾಲಾ ದೈಹಿಕ ಶಿಕ್ಷಕಿಯಾದ ಶ್ರೀಮತಿ ವಿಂಧ್ಯ ಇವರು ತರಬೇತಿ ನೀಡಿದ್ದು, ಈ ತಂಡ ಆಗಸ್ಟ್ ತಿಂಗಳ 29 ನೇ ತಾರೀಕು ನಡೆಯುವ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸ್ಪರ್ಧಿಸಲಿದ್ದಾರೆ.

Leave a Comment

error: Content is protected !!