July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಕಳಿಯ ಪರಪ್ಪು ಬಸ್ಸು ನಿಲ್ದಾಣದ ರಸ್ತೆ ಬದಿಯಲ್ಲಿ ಸತ್ತ ದನವನ್ನು ಎಸೆದು ಹೋದ ಅಕ್ರಮ ದನ ಕಳ್ಳ ಸಾಗಾಟಗಾರರು

ಗೇರುಕಟ್ಟೆ: ಆ.24ರಂದು ಬೆಳಗ್ಗಿನ ಜಾವ ಯಾರೋ ಅಕ್ರಮ ದನ ಸಾಗಾಟಗಾರರು ಕಳಿಯ ಗ್ರಾಮದ ಪರಪ್ಪು ಬಸ್ಸು ನಿಲ್ದಾಣದ ಸ್ವಲ್ಪ ಮುಂದೆ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ ಬದಿಯಲ್ಲಿ ಸಾಗಾಟ ಮಾಡುವಾಗ ಸತ್ತುಹೋಗಿದ್ದ ದನವನ್ನು ಎಸೆದು ಹೋದ ಘಟನೆ ವರದಿಯಾಗಿದೆ.


ಈ ಪ್ರದೇಶದಲ್ಲಿ ಅಕ್ರಮ ದನ ಸಾಗಾಟವು ವ್ಯಾಪಕವಾಗಿ ನಡೆಯುತ್ತಿದೆಯೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪೋಲಿಸ್ ಇಲಾಖೆಯು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಹಾಗೂ ಅವ್ಯಾಹತವಾಗಿ ಅಕ್ರಮ ದನ ಸಾಗಾಟ ಮಾಡುತ್ತಿರುವವರನ್ನು ತಡೆಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.


ವಿಷಯ ತಿಳಿದ ಬೆಳ್ತಂಗಡಿ ಠಾಣಾ ಉಪನಿರೀಕ್ಷಕರಾದ ಧನರಾಜ್ ಮಾರ್ಗದರ್ಶನದಂತೆ ಕಳಿಯ ಬೀಟ್ ಪೊಲೀಸರಾದ ಚರಣ್ ಕೂಡಲೇ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಪರಿಮ, ಮರೀಟಾ ಪಿಂಟೋ ಮತ್ತು ಸಾರ್ವಜನಿಕರು ಸ್ಥಳ ಪರಿಶೀಲನೆ ಮಾಡಿದರು.

Related posts

ಬೆಳ್ತ೦ಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ಬಂದಾರು: ಕಳೆದು ಹೋಗಿದ್ದ ರೂ.2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದನ್ನು ಹಿಂದುರುಗಿಸಿ ಕೊಟ್ಟು ಮಾನವೀಯ ಮೆರೆದ ವಿನಯ್ ನಿವೇದಿತಾ

Suddi Udaya

ಪ್ರಧಾನಿಯಾಗಿ ನರೇಂದ್ರಮೋದಿಯವರ ಪ್ರಮಾಣ ವಚನ: ಇಂದಬೆಟ್ಟುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Suddi Udaya

ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ: ಪುಟಾಣಿ ಮಕ್ಕಳು ಪ್ರೀತಿಯ ಗುರುಗಳಿಗೆ ಪೆನ್ನು,ಹೂ ನೀಡಿ ಗೌರವ ಸಲ್ಲಿಕೆ

Suddi Udaya

ಬೆಳ್ತಂಗಡಿ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಬೆಂಗಳೂರು ಸೆಮಿಕಂಡಕ್ಟರ್ ವಿನ್ಯಾಸ ಸಂಸ್ಥೆ: 280 ಕೋಟಿ ರೂ. ಗೆ ಇನ್ಫೋಸಿಸ್ ಸ್ವಾಧೀನ

Suddi Udaya
error: Content is protected !!