ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಕ್ಷೇಮ ನಿಧಿ ಯೋಜನೆ ಸಹಾಯಧನ ವಿತರಣೆ

Suddi Udaya

ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿ ಯೋಜನೆಯ 17ನೇ ಸಹಾಯಧನ ರೂ. 10,000ವನ್ನು ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘ ಪಿಲಿಗೂಡು ಇದರ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿದ್ದ ಬಾಬು ಪೂಜಾರಿ ಇವರಿಗೆ ನೀಡಲಾಯಿತು.


ಪಾರ್ಶವಾಯುಗೆ ಒಳಗಾದ ಇವರನ್ನು ಬೆನಕ ಆಸ್ಪತ್ರೆ ಉಜಿರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇವರಿಗೆ ಬಿಎಂಎಸ್ ರಿಕ್ಷಾ ಚಾಲಕರ ಸಂಘ ತಾಲೂಕು ಸಮಿತಿಯ ಸದಸ್ಯರಾದ ಜಗದೀಶ್ ಶೆಟ್ಟಿ ಕಣಿಯೂರು ನೀಡಿದರು.

ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘ ಪಿಲಿಗೂಡು ಇದರ ಅಧ್ಯಕ್ಷರಾದ ಸೀತಾರಾಮ, ಸದಸ್ಯರಾದ ಚಿದಾನಂದ, ಬಾಲಕೃಷ್ಣ, ಉಮ್ಮರ್ ಕುಂಞ, ಕಾರ್ತಿಕ್ ಹಾಗೂ ಗ್ರಾ. ಪಂ. ಮಾಜಿ ಸದಸ್ಯ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.

Leave a Comment

error: Content is protected !!