ಕೊಕ್ಕಡ ಉಪ್ಪಾರಹಳ್ಳದಲ್ಲಿ ದಿಢೀರನೆ ಎದ್ದ ಭೀಕರ ಸುಂಟರ ಗಾಳಿ: ಗಾಳಿಗೆ ಹಾರಿ ಹೋಯಿತು ಹಲವು ಮನೆಗಳ ಹಂಚು, ಶೀಟ್ -ತೋಟಗಳಲ್ಲಿ ಮುರಿದು ಬಿತ್ತು ಅಡಿಕೆ, ತೆಂಗಿನ ಮರಗಳು

Suddi Udaya

ಕೊಕ್ಕಡ : ಕೊಕ್ಕಡ ಪರಿಸರದ ಉಪ್ಪಾರಹಳ್ಳದಲ್ಲಿ ಇಂದು ಎದ್ದ ಸುಳಿಗಾಳಿಗೆ ಹಲವಾರು ಅಡಿಕೆ ಮರಗಳು, ಮನೆಗಳ ಶೀಟು, ಹಂಚುಗಳು ಹಾರಿ ಹೋಗಿ ಬಹಳಷ್ಟು ಹಾನಿಯಾಗಿದೆ.

ಗೋಳಿತೊಟ್ಟು ಬಳಿಯ ಕೋಡಿಂಗೇರಿ ಪ್ರದೇಶದ ಉಪ್ಪಾರಹಳ್ಳದಲ್ಲಿ ಎದ್ದ ಸುಳಿಗಾಳಿಗೆ ಒಬ್ಬರ 120 ಅಡಿಕೆ ಮರಗಳು ಉರುಳಿ ಬಿದ್ದಿದೆ. ಕೊಕ್ಕಡ ಪ್ರದೇಶದಲ್ಲಿ ಅನೇಕರ

ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಕೋಡಿಂಗೇರಿ ರತ್ನಾವತಿ ಕೃಷ್ಣಪ್ಪ ಗೌಡ ಅವರ ಮನೆಯ ಹಂಚು ಹಾಗೂ ಶೀಟ್ ಸಂಪೂರ್ಣ ಹಾರಿಹೋಗಿ ಹಾನಿಯಾಗಿದೆ. ಪಿಜಿನಡ್ಕ ಕಾಲೋನಿಯ ಒಂದಿಬ್ಬರ ಮನೆಯ ಶೀಟುಗಳು ಹಾರಿ ಹೋಗಿದೆ. ನಂತರ ಡೆಂಜ, ಅಗರ್ತ ಬೀಸುವ ಸಂಧರ್ಭ ಅದರ ವೇಗ ಕಡಿಮೆಯಾಗಿದೆ. ಸುಳಿಗಾಳಿಯ

ಭೀಕರತೆಯನ್ನು ಕಣ್ಣಾರೆ ಕಂಡ ಶಿವಪ್ಪ ಗೌಡರು ಹೇಳುವ ಪ್ರಕಾರ ಅವರು ಗುಡ್ಡದಲ್ಲಿರುವ ತನ್ನ ತೋಟದ ತೆಂಗಿನ ಮರಗಳಿಗೆ ಗೊಬ್ಬರ ಹಾಕುತ್ತಿದ್ದು, ಆ ಸಂಧರ್ಭ ವಿಪರೀತ

ಶಬ್ದ ಕೇಳಿದೆ. ಶಬ್ದ ಬರುವ ಕಡೆ ನೋಡಿದಾಗ ಗಿಡಗಳು ತುಂಡಾಗುವ ಶಬ್ದ ಕೇಳಿ ಬರುತ್ತಿದ್ದು ಇದು ವಿಮಾನವೇ ಬಿದ್ದಿದೆ ಎಂದು ಕೆಳಗಡೆ ಓಡಿ ಬಂದಿದ್ದಾರೆ. ಅಡಿಕೆ ಸೋಗೆಗಳು ಬಹಳಷ್ಟು ಎತ್ತರದಲ್ಲಿ ಹಾರಾಡುವುದು ಕಾಣುತ್ತಿತ್ತಂತೆ. ಘಟನಾ ಸ್ಥಳಕ್ಕೆ ಕಂದಾಯ, ಪಂಚಾಯತ್ ಅಧಿಕಾರಿಗಳು, ಗ್ರಾ. ಪಂ. ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಸದಸ್ಯ ಜಗದೀಶ್ ಕೆಂಪಕೋಡಿ ಭೇಟಿ ನೀಡಿದ್ದಾರೆ.

Leave a Comment

error: Content is protected !!