ಉರುವಾಲು:32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಊರುವಲು :32 ನೇ‌ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಕೃಷ್ಣ ಸೇವಾ ಸಮಿತಿ ಕಾರಿಂಜ ಬಾಕಿಮಾರು ಇವರ ನೇತೃತ್ವದಲ್ಲಿ ಉರುವಾಲು ಗ್ರಾಮದ ಪಿಲಿಕಲ್ಲು ಮೈದಾನದಲ್ಲಿ ನಡೆಸಲಾಯಿತು. ಸಾರ್ವಜನಿಕರಿಗೆ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸೇವಾ ಸಮಿತಿಯ ಅಧ್ಯಕ್ಷರಾದ ಹೇಮಂತ್ ಸಿ ಚೆಂಡೆತ್ತಿಮಾರು, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶವಂತ ಯನ್,ವಿಜಯ ಕುಮಾರ್ ಕಲ್ಲಳಿಕೆ, ವಿಘ್ನೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಗೌಡ ನೀನಿ, ಉಪ್ಪಿನಂಗಡಿ ಠಾಣಾಧಿಕಾರಿ ಲಿಂಗರಾಜ್, ಡೀಕಯ್ಯ ಗೌಡ ನೀನಿ,ಮಂಜುನಾಥ ಗೌಡ ಪಿಲಿಕಲ್ಲು ಹಾಗೂ ಸತ್ಯನಾರಾಯಣ ಗೌಡ ಪಿಲಿಕಲ್ಲು ಹಾಜರಿದ್ದರು.ಆಟೋಟ ಸ್ಪರ್ಧೆಗಳನ್ನು ದಿನೇಶ್ ಚಿಕ್ಕಮಗಳೂರು ಇವರು ನಡೆಸಿಕೊಟ್ಟರು.ಕಾರ್ಯಕ್ರಮದ ನಿರೂಪಣೆಯನ್ನು ಸತೀಶ್ ಪೂಜಾರಿ ಪಿಲಿಕಲ್ಲು ನಡೆಸಿಕೊಟ್ಟರು.

Leave a Comment

error: Content is protected !!