30.8 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

ಮಂಗಳೂರು :ಕೇರಳದ ಕೊಟ್ಟಯಂ ಜಿಲ್ಲೆಯ ಪಾಲ ಸೆಂಟ್ ಅಲ್ಫೋನ್ಸಿಯನ್ ಸೆಂಟರ್ ನಲ್ಲಿ ನಡೆದ ಜಾಗತಿಕ ಸೀರೋ ಮಲಬಾರ್ ಧರ್ಮ ಸಭೆಯ ಐದನೇ ಜಾಗತಿಕ ಧರ್ಮ ಸಂಸದ್ ನಲ್ಲಿ ಸೀರೋ ಮಲಬಾರ್ ಧರ್ಮ ಸಭೆಯ ಸುಮಾರು ಐದು ಭೂಖಂಡಗಳ ಹದಿನಾರು ದೇಶಗಳ ಮೂವತ್ತಾಯಿದು ಧರ್ಮ ಪ್ರಾಂತ್ಯಗಳ ಆಯ್ದ 348 ಮಂದಿ ಪ್ರತಿನಿಧಿಗಳ ಸಮ್ಮೇಳನವು ಆ.22 ರಿಂದ ಆ 25 ರ ವರೆಗೆ ಅತ್ಯಂತ ಯಶಸ್ವಿಯಾಗಿ ಜರಗಿತು.


ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಮತ್ತು ಪಶು ಸಂಗೋಪನಾ ಸಚಿವ ಜೋರ್ಜ್ ಕುರಿಯನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದಿಂದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ, ವಿಕಾರ್ ಜೆನೆರಲ್ ಅತಿ ವಂದನಿಯ ಫಾ. ಜೋಸ್ ವಲಿಯಪರಂಭಿಲ್, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು ಕ್ಯಾಥೋಲಿಕ್ ಯೂನಿಯನ್ ನಿಕಟ ಪೂರ್ವ ಅಧ್ಯಕ್ಷರು ಧರ್ಮ ಪ್ರಾಂತಿಯ ಪಾಲನ ಸಮಿತಿಯ ಸದಸ್ಯರು ಹಿರಿಯ ವಕೀಲರು ಸೇವಿಯಾರ್ ಪಾಲೇಲಿ, ಧರ್ಮ ಪ್ರಾಂತ್ಯ ದ ಕೇಂದ್ರ ಪಾಲನ ಸಮಿತಿಯ ಸದಸ್ಯರು ಎ ಕೆ ಸಿ ಸಿ ಜಾಗತಿಕ ಕಾರ್ಯದರ್ಶಿಗಳಲ್ಲಿ ಓರ್ವ ರಾದ ಜೈಸನ್ ಪಟ್ಟೀರಿ, ಮಾತೃ ವೇದಿಕೆ ಧರ್ಮ ಪ್ರಾಂತಿಯ ಅಧ್ಯಕ್ಷೆ ಶ್ರೀಮತಿ ಮೆರ್ಸಿ ಚಾಕೋ ಬಜಗೋಳಿ, ಮಡಂತ್ಯಾರು ಕಾಲೇಜಿನ ಪ್ರಾದ್ಯಪಕ ಅಲ್ವಿನ್ ಕೊಚ್ಚು ಪುರಕಲ್ ವೇಣೂರು ಭಾಗವಹಿಸಿದರು.


ಕಾರ್ಯಕ್ರಮವು ಸೀರೋ ಮಲಬಾರ್ ಸಭೆಯ ಭವಿಷ್ಯದ ಮಾರ್ಗದರ್ಶನಕ್ಕಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ವೇದಿಕೆ ಒದಗಿಸಿತು, ಮತ್ತು ಪ್ರತಿನಿಧಿಗಳಿಂದ ಅತ್ಯಧಿಕ ಸಹಕಾರವನ್ನು ಪಡೆದಿತು.

Related posts

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಆರಂಬೋಡಿ ಅಜ್ವಾಡಿ ನಿವಾಸಿ ಜಿನ್ನಮ್ಮ ( ಬೇಬಿ) ನಿಧನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಬಂದೂಕು ಪ್ರಕರಣ ಮಧ್ಯಂತರ ತಡೆ ಮುಂದೂಡಿದ ಹೈಕೋರ್ಟ್

Suddi Udaya
error: Content is protected !!