ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ ಹೊಂದಿದ್ದ ಡಾ. ಶ್ರೀಧರ ಭಟ್ ರವರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಕ್ಷೇತ್ರ ಸೌತಡ್ಕದ ಮಾಜಿ ವ್ಯವಸ್ಥಾಪನ ಸಮಿತಿ

Suddi Udaya

ಹಿಂದೆ ಸೌತಡ್ಕ ಕ್ಷೇತ್ರದ ಇತಿಹಾಸ ಕಿರು ಪರಿಚಯ ಶ್ರೀ ಕ್ಷೇತ್ರ ಸೌತಡ್ಕ ಕೃತಿ ಬಿಡುಗಡೆಗೊಳಿಸಿದ ಚಿತ್ರ

ಕೊಕ್ಕಡ: ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಧರ ಭಟ್ ರವರು 2021-24 ನೇ ಸೌತಡ್ಕ ದೇವಳದ ವ್ಯವಸ್ಥಾಪನಾ ಸಮಿತಿಯ ಅವಧಿಯಲ್ಲಿ ಹೊರ ತಂದಿರುವ ಶ್ರೀ ಕ್ಷೇತ್ರ ಸೌತಡ್ಕ. ನೆಲೆ -ಹಿನ್ನೆಲೆ ಮತ್ತು ಭಕ್ತಿ ಸ್ತೋತ್ರಗಳು. ಎನ್ನುವ ಕೃತಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಒಂದು ದಶಕದ ಹಿಂದೆ ಬೆಳ್ತಂಗಡಿ ತಾಲೂಕಿನ ದೇವಾಲಯಗಳ ಕಿರು ಅಧ್ಯಯನವನ್ನು ಸೌತಡ್ಕ ಗಣಪತಿ ದೇವರಿಗೆ ಪೂಜೆಯೊಂದಿಗೆ ಪ್ರಾರಂಭಿಸಿದರು. ಅಂದು ಪೂಜೆ ಮಾಡುತ್ತಿದ್ದ ಶ್ರೀ ಸತ್ಯ ಪ್ರಿಯ ಕಲ್ಲೂರಾಯರು ಎಲ್ಲರೂ ತಮ್ಮ ಕೆಲಸ ಪ್ರಾರಂಭಿಸುವಾಗ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ ನೀವು ದೇವರದ್ದೇ ಕೆಲಸವನ್ನು ಮಾಡುತ್ತಿದ್ದೀರಿ, ನಿಮಗೆ ದೇವರ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಿ ಆಶೀರ್ವಾದ ಮಾಡಿದ್ದರು. ಅಂತೆಯೇ ಇವರು ಹಿಂದೆ ಸೌತಡ್ಕ ಕ್ಷೇತ್ರದ ಇತಿಹಾಸ ಕಿರು ಪರಿಚಯ ಕೃತಿಯನ್ನು ಬರೆದು ಬಿಡುಗಡೆ ಗೊಳಿಸಿದ್ದು, ಇವರು ಅಂದು ಮಾಡಿದ ಸೇವೆಗೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ್ದು ಇವರಿಗೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ನಿಕಟ ಪೂರ್ವ ವ್ಯವಸ್ಥಾಪನ ಸಮಿತಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.


Leave a Comment

error: Content is protected !!