ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಮಚ್ಚಿನದಲ್ಲಿ ಉದ್ಘಾಟನೆ

ಮಚ್ಚಿನ : ಸಂಸ್ಕಾರ ಸಹಕಾರ ಸಂಘಟನೆ ಸಮೃದ್ಧಿಯ ಧ್ಯೇಯದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹುಟ್ಟು ಹಾಕಿದ ಸಂಸ್ಥೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬಂಟ್ವಾಳ ತಾಲೂಕು ಇದರ ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿಯನ್ನು ಮಚ್ಚಿನ ಗ್ರಾಮದಲ್ಲಿ ಸುಂದರ ಪೂಜಾರಿ ಅವರ ಕಟ್ಟಡದಲ್ಲಿ ಆ.29ರಂದು ಉದ್ಘಾಟನೆಗೊಂಡಿತು.

ಪ್ರಗತಿಪರ ಕೃಷಿಕರಾದ ಕೃಷ್ಣ ಪ್ರಭು ಮುದಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರಾಗಿ ಮಚ್ಚಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇರು ಮಾತನಾಡಿ ಒಂದೇ ಮನಸ್ಸಿನ ಸದಸ್ಯರು ಒಟ್ಟುಗೂಡಿ ಸಂಘವನ್ನು ರಚಿಸಿ ಉಳಿತಾಯ ಮಾಡಿ ಸಾಲವನ್ನು ಪಡೆದು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಪ್ರಮೋದ್ ಕುಮಾರ್, ಸದಸ್ಯರಾದ ಶುಭಕರ, ಡಾ. ಮಾಧವ ಕೆ ಶೆಟ್ಟಿ ಬಳ್ಳಮಂಜ, ವಲಯದ ಸೇವಾ ದೀಕ್ಷಿತೆಯರಾದ ಜಯಮಾಲಾ, ಪುಷ್ಪವತಿ, ಶಶಿಕಲಾ, ಸರೋಜಿನಿ, ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಪ್ರಭು, ವಲಯ ಸಂಯೋಜಕಿ ಸುಮಿತ್ರ ಉಪಸ್ಥಿತರಿದ್ದರು.

ಹರೀಶ್ ಕುಮಾರ್ ಕಾರ್ಯಕಮ ನಿರೂಪಿಸಿ, ಪುರಂದರ ಸ್ವಾಗತಿಸಿದರು. ಮಚ್ಚಿನ ಗ್ರಾಮದ ಸೇವಾ ದೀಕ್ಷಿತೆ ಮಂಜುಳಾ ಶರ್ಮ ಧನ್ಯವಾದವಿತ್ತರು.

Related posts

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- ಶೇ 20 ಡಿವಿಡೆಂಡ್ ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳ ಡಿ ವರ್ಗದ ಹೊರ ಗುತ್ತಿಗೆ ನೌಕರರಿಗೆ ಉಚಿತ ಸಮವಸ್ತ್ರ ನೀಡುವ ಘೋಷಣೆ

Suddi Udaya

ಶಿಶಿಲ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ದೂರು ಅರ್ಜಿಯ ಮೇರೆಗೆ ಸ್ಥಳ ಪರಿಶೀಲಿಸಿದ ಶಾಸಕರು

Suddi Udaya

ರಾಜ್ಯದ ಅಡಿಕೆ ಲಾರಿಗಳು ಮಹಾರಾಷ್ಟ್ರದಲ್ಲಿ ಜಪ್ತಿ,ಕರಾವಳಿಯಲ್ಲಿ ಅಡಿಕೆ ಧಾರಣೆ ಕುಸಿತದ ಆತಂಕ

Suddi Udaya

ಬೆಳ್ತಂಗಡಿ:ಫೆ.21ಮತ್ತು24 ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya

ಯಾವುದೇ ನೋಟೀಸು ನೀಡದೆ, ಕಾರಣವಿಲ್ಲದೆ ಏಕಾಏಕಿ ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿರುವುದು ಯಾವ ನ್ಯಾಯ: ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಕೊಡಿ : ಜಯಾನಂದ ಲಾಯಿಲ

Suddi Udaya
error: Content is protected !!