25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಲ್ಕೂರು: ಸಮಾಜ ಸೇವಕ ಹೆಚ್. ಧರ್ಣಪ್ಪ ಪೂಜಾರಿಯವರಿಗೆ ಯುವಶಕ್ತಿ ಫ್ರೆಂಡ್ಸ್ ನಿಂದ ಸನ್ಮಾನ

ಬಳಂಜ: ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ, ಮಾಜಿ ತಾ.ಪಂ ಸದಸ್ಯ, ಹಿರಿಯರು, ಸಮಾಜ ಸೇವಕರಾದ ಹೆಚ್. ಧರ್ಣಪ್ಪ ಪೂಜಾರಿಯವರನ್ನು ಸಮಾಜಕ್ಕೆ ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಹೆಚ್. ಧರ್ಣಪ್ಪ ಪೂಜಾರಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ ಬದುಕಿನಲ್ಲಿ ಯಾವತ್ತಿಗೂ ನಾವು ಇನ್ನೊಬ್ಬರಿಗೆ ಸಹಾಯ ಮಾಡಬೇಕೆ ವಿನಃ ಕೆಟ್ಟದ್ದನ್ನು ಬಯಕಬಾರದು. ನಾವು ಮಾಡುವ ಒಳ್ಳೆಯ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ. ಯುವಶಕ್ತಿ ಫ್ರೆಂಡ್ಸ್ ತಂಡ ಸಮಾಜಮುಖಿಯಾಗಿ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ,ತಿಮ್ಮಪ್ಪ ಪೂಜಾರಿ ತಾರಿಪಡ್ಪು, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಹೆಚ್. ದೇಜಪ್ಪ ಪೂಜಾರಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್‌.ಎಸ್, ಯುವಶಕ್ತಿ ಫ್ರೆಂಡ್ಸ್ ತಂಡದ ಸಂತೋಷ್ ಪಿ ಕೋಟ್ಯಾನ್, ವಿಜಯ ಪೂಜಾರಿ, ಕರುಣಾಕರ ಹೆಗ್ಡೆ,ರಂಜಿತ್ ಪೂಜಾರಿ,ಜಗದೀಶ್ ಪೂಜಾರಿ, ಸಂತೋಷ್ ಕೋಟ್ಯಾನ್, ದಿನೇಶ್ ಪೂಜಾರಿ,ರಕ್ಷಿತ್,ಪ್ರಶಾಂತ್ ಕೋಟ್ಯಾನ್,ಶರತ್ ಅಂಚನ್,ಪ್ರಣಾಮ್ ಶೆಟ್ಟಿ,ಸುಧೀಶ್ ಪೂಜಾರಿ, ಯತೀಶ್ ವೈ,ಯೋಗೀಶ್ ಆರ್, ಪ್ರವೀಣ್ ಡಿ ಕೋಟ್ಯಾನ್, ಸಂಪತ್ ಕೋಟ್ಯಾನ್, ಚಂದ್ರಹಾಸ್ ಬಳಂಜ, ಕಿರಣ್ ಪೂಜಾರಿ, ಪ್ರಥಮ್, ಸಾಯಿ, ಸುಧೀರ್ ಸಾಲಿಯಾನ್,ಮಹೇಶ್ ಕುಲಾಲ್, ಜಯಪ್ರಸಾದ್ ಕೋಟ್ಯಾನ್, ಪ್ರಶಾಂತ್ ಅಂಚನ್, ಸತೀಶ್ ಕೋಟ್ಯಾನ್ ಹಾಗೂ ಅನಸೂಯ, ದೀಪಕ್ ಹೆಚ್.ಡಿ, ಸಂಧ್ಯಾ ಹೆಚ್.ಡಿ, ಅನರ್ಘ್ಯ, ಹೃತಿಕ್ ತಾರಿಪಡ್ಪು ಉಪಸ್ಥಿತರಿದ್ದರು.

Related posts

ಜೂ.21: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

Suddi Udaya

ಉಪ ತಹಸಿಲ್ದಾರ್ ಸುನಿಲ್ ಹೃದಯಘಾತದಿಂದ ನಿಧನ

Suddi Udaya

ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸದಸ್ಯರು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಸಾಧಕರಿಗೆ ಸನ್ಮಾನ

Suddi Udaya

ತಣ್ಣೀರುಪಂತ ಗ್ರಾ.ಪಂ.ನಲ್ಲಿ ಮಕ್ಕಳ ಸ್ನೇಹಿ ಅಭಿಯಾನದ ಪೂರ್ವಸಿದ್ಧತಾ ಸಭೆ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ದಿಡೀರ್ ಭೇಟಿ

Suddi Udaya

ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾದ‌ಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ‌ ಹಾಗೂ ನೇಮೋತ್ಸವ

Suddi Udaya
error: Content is protected !!