ಕಲ್ಮಂಜ: ಓಂಕಾರೇಶ್ವರ ಭಜನಾ ಮಂಡಳಿ ಶ್ರೀ ಕ್ಷೇತ್ರ ಪಜಿರಡ್ಕ ಇದರ ಆಶ್ರಯದಲ್ಲಿ 12ನೇ ವರ್ಷದ ಗೋಕುಲಾಷ್ಟಮಿ

Suddi Udaya

ಕಲ್ಮಂಜ :ಓಂಕಾರೇಶ್ವರ ಭಜನಾ ಮಂಡಳಿ ಶ್ರೀ ಕ್ಷೇತ್ರ ಪಜಿರಡ್ಕ ಕಲ್ಮಂಜ ಇದರ ಆಶ್ರಯದಲ್ಲಿ 12ನೇ ವರ್ಷದ ಗೋಕುಲಾಷ್ಟಮಿ ಉದ್ಘಾಟನೆ ಬಿ.ಬಾಲಚಂದ್ರರಾವ್ ಗುತ್ತು ಮನೆ ನೇರವೇರಿಸಿದರು.

ಅಧ್ಯಕ್ಷತೆಯನ್ನು ಪಜಿರಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ವಹಿಸಿದ್ದರು. ಅನಂತೇಶ ಹೊಳ್ಳ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕಲ್ಮಂಜ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ಹೆಬ್ಬಾರ್ , ಪಜಿರಡ್ಕ ಓಂಕಾರೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುಜನ್ ಕುಮಾರ್, ಜಯಲಕ್ಷ್ಮೀ ಯೋಗೀಶ್ ಬೀಜದಪಾಡಿ ಉಪಸ್ಥಿತರಿದ್ದರು.

ಸಂಚಾಲಕ ರಾಜೇಶ್ ಎಂ.ಕೆ ಪ್ರಾಸ್ತವನೆ ಮಾಡಿದರು. ತೇಜಸ್ವಿನಿ, ಸ್ವಾತಿ, ಶ್ರದ್ಧಾ ಪ್ರಾರ್ಥಿಸಿದರು. ಕಾರ್ಯದರ್ಶಿ ಚೇತನ್ ಗುಡಿಗಾರ್ ಸ್ವಾಗತಿಸಿದರು. ಆನಂದ್ ಎಸ್.ಡಿ ವಂದಿಸಿದರು. ಸುಂದರೇಶ್ ಎಂ.ಕೆ ನಿರೂಪಿಸಿದರು.

Leave a Comment

error: Content is protected !!