ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನದ ಮಹತ್ವದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಗೌಡ ಮಾತನಾಡಿ ಮನುಷ್ಯ ಸೇರಿ ಜಗತ್ತಿನ ಜೀವ ಜಾಲಗಳು ಕ್ರೀಡೆಯ ಕುರಿತು ತಾಳಿರುವ ಆಸಕ್ತಿ ಮತ್ತು ಉಪಯೋಗವನ್ನು ವಿವರಿಸುತ್ತಾ, ಒಲಂಪಿಕ್ಸ್ ನ್ನಂತಹ ಕ್ರೀಡೆಯಲ್ಲಿ 1900 ರಿಂದ ಇಲ್ಲಿಯವರೆಗೆ ಪಡೆದ ಕ್ರೀಡಾ ಪದಕಗಳ ಕುರಿತು ಹಾಗೂ ಅ ಮೂಲಕ ಭಾರತ ಜಗತ್ತಲ್ಲಿ ಹೇಗೆ ವಿಶ್ವಮಾನ್ಯತೆಯನ್ನು ಪಡೆಯಬಲ್ಲದು ಎಂಬುದನ್ನು ಉಲ್ಲೇಖಿಸಿದರು.
ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಕೋಶಾಧಿಕಾರಿ ಎಂ.ಕೆ ಕಾಶಿನಾಥ್, ಶೈಕ್ಷಣಿಕ ನಿರ್ದೇಶಕರು ಗಂಗಾಧರ್ ಇ ಮಂಡಗಳಲೆ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾ ಪ್ರತಿಜ್ಞೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.