ಅಂಡಿಂಜೆ: ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಅಂಡಿಂಜೆ: ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 2 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಶ್ರೀ ವಿನಾಯಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಧೀಶ್ಚಂದ್ರ ಹೆಗ್ಡೆ ಕೊಕ್ರಾಡಿ ನೇರವೇರಿಸಿ ಶುಭ ಕೋರಿದರು. ಅಧ್ಯಕ್ಷತೆ ಅಂಡಿಂಜೆ ಯುವಕ‌ ಮಂಡಲದ ಅಧ್ಯಕ್ಷ ಪ್ರಾಣೇಶ್ ಮುಂಡೇವು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಸಂತ ಸಾಲ್ಯಾನ್ ಹಿಂಪ್ಲೊಟ್ಟು, ನಿತಿನ್ ಮುಂಡೇವು ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ,
ಗಿರೀಶ್ ಮೂಡುಕೋಡಿ ನ್ಯೂ ಹಲೆಕ್ಕಿ, ರಾಜಶೇಖರ್ ಅಂಡಿಂಜೆ, ಮಹಾಬಲ ನೆಲ್ಲಿಂಗೇರಿ, ಯೋಗೀಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಹಲವಾರು ಮಕ್ಕಳು ಕೃಷ್ಣವೇಷ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಪ್ರಶಾಂತ್ ಮಂಜುಗಿರಿ ಸ್ವಾಗತಿಸಿ, ಅಶ್ವಿನ್ ಮುಂಡೇವು ವಂದಿಸಿದರು. ದಿವ್ಯ ಪ್ರಶಾಂತ್ ನಿರೂಪಿಸಿದರು.
ಪ್ರವೀಣ್ ನವಜ್ಯೋತಿ, ರಾಜೇಶ್ ಮುಂಡೆವು,ಮಿಥುನ್ ದುಗಣಬೆಟ್ಟು,ಶಶಿ ಹೆಗ್ಡೆ ಹಾಗೂ ಯುವಕ ಮಂಡಲದ ಸದಸ್ಯರು ಸಹಕರಿಸಿದರು.

Leave a Comment

error: Content is protected !!