ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನನೊಂದು ಸುತ್ತಾಡುತ್ತಿದ್ದ ಮಹಿಳೆಗೆ ಸಾಂತ್ವನ ಹೇಳಿ, ಕುಟುಂಬದ ಜೊತೆ ಕಳಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ರವಿ ಕಕ್ಕೆಪದವು

Suddi Udaya

ಬೆಳ್ತಂಗಡಿ:ಕುಕ್ಕೆ ಸುಬ್ರಮಣ್ಯ ಕುಮಾಧಾರದ ಹತ್ತಿರ ಮಹಿಳೆಯೊರ್ವರು ಮನನೊಂದು ಅಲ್ಲಿ ಇಲ್ಲಿ ಸುತ್ತಾಡುತ್ತಿರುವ ವೇಳೆ ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಸಮಾಜ ಸೇವಾ ಟ್ರಸ್ಟ್ ನ ಕೋಶಾಧಿಕಾರಿಯಾದ ಮಣಿಕಂಠನವರು ಇದನ್ನು ಗಮನಿಸಿ ತತಕ್ಷಣವೇ ಸಮಾಜ ಸೇವಕ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ರವಿ ಕಕ್ಕೆ ಪದವು ರವರಿಗೆ ಮಾಹಿತಿ ನೀಡಿದರು.

ತಕ್ಷಣವೇ ರವಿ ಕಕ್ಯೆಪದವು ಬಂದು ಆ ಮಹಿಳೆಯನ್ನು ವಿಚಾರಿಸಿದಾಗ ಆ ಮಹಿಳೆ ಮನನೊಂದು ನಾನು ಸಾಯಬೇಕು ಎನ್ನುವ ದುಃಖವನ್ನು ತೋಡಿಕೊಂಡರು.ನಂತರ ರವಿ ಕಕ್ಕೆ ಪದವು ಹಾಗೂ ಮಣಿಕಂಠನವರು ಸೇರಿ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ,ಅವರನ್ನು ಕುಕ್ಕೆಸುಬ್ರಹ್ಮಣ್ಯಕ್ಕೆ ಕರೆಸಿ ಮಾತನಾಡಿ ಮಹಿಳೆಯನ್ನು ಕುಟುಂಬದ ಜೊತೆ ಕಳಿಸುವ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

Leave a Comment

error: Content is protected !!