ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

Suddi Udaya

ಕಣಿಯೂರು: ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ(46ವ)ರವರು ಸೆ.4ರಂದು ಅನಾರೋಗ್ಯದಿಂದ ನಿಧನರಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮುಂಜ ದರ್ಖಾಸು ಮನೆ ಉಮೇಶ್ ರವರ ದೂರಿನಂತೆ ಉಮೇಶ್ ರವರ ಅಣ್ಣ ಕುಶಾಲಪ್ಪ (46) ರವರು ಸುಮಾರು 02 ವರ್ಷಗಳಿಂದ ಬಿ.ಪಿ ಶುಗರ್, ಅಸ್ತಮ ಖಾಯಿಲೆಯಿಂದ ಬಳಲುತ್ತಿದ್ದು ಇತೀಚೆಗೆ ಕೆಲಸಕ್ಕೆ ಹೋಗದೇ ಕಣಿಯೂರು ಗ್ರಾಮದ ಪದ್ಮುಂಜ ದರ್ಖಾಸು ಮನೆಯಲ್ಲಿ ಇದ್ದು, ಸುಮಾರು 03 ದಿನಗಳಿಂದ ಊಟ ಮಾಡಲು ಆಗದೇ ವಾಂತಿ ಮಾಡಿಕೊಂಡು ಮನೆಯಲ್ಲಿ ಇದ್ದವನು ಸೆ. 04. ರಂದು ಕುಶಾಲಪ್ಪನು ವಿಪರೀತ ಸುಸ್ತು ಅಗಿ ಯಾವುದೇ ಮಾತುಗಳನ್ನು ಆಡದೇ ಇದ್ದವನನ್ನು ಉಮೇಶ್ ಮತ್ತು ಕುಶಾಲಪ್ಪರವರ ಹೆಂಡತಿ ಉಷಾ ಹಾಗೂ ನೆರೆಮನೆಯವರಾದ ಕೊರಗಪ್ಪ ಎಂಬವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಅಸ್ಷತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಕುಶಾಲಪ್ಪನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಕುಶಾಲಪ್ಪನು ಸರಿಯಾಗಿ ಆಹಾರ ಸೇವನೆ ಮಾಡದೇ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ: 32/2024 ಕಲಂ: 194 BNSS. ಯಂತೆ ಪ್ರಕರಣ ದಾಖಲಾಗಿರುತ್ತದೆ

Leave a Comment

error: Content is protected !!