ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ.

Suddi Udaya

ಕಣಿಯೂರು: ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ.
ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಪಂ ಉಪಾಧ್ಯಕ್ಷರಾದ ಜಾನಕಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಬಿ ಸಿ ಎಂ ತಾಲೂಕು ಅಧಿಕಾರಿ ಜೋಸೆಫ್ ರವರು ನೋಡಲಾಧಿಕಾರಿಯಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲೂಕು ವ್ಯವಸ್ಥಾಪಕರಾದ ಜಯಲಕ್ಷ್ಮಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಾವಣ್ಯ ಹರಿಣಿ ಯ ರವರು ನಿರ್ವಹಣೆಗೊಂಡ ಕಾಮಗಾರಿಗಳ ಪಟ್ಟಿ ಓದಿ ಹೇಳಿದರು.ಕೆಲವು ಕಾಮಗಾರಿಗಳಲ್ಲಿ ನ್ಯೂನತೆಗಳು ಕಂಡು ಬಂದಿದ್ದು ಸರಿಪಡಿಸುವಂತೆ ನೋಡಲಾ ಧಿಕಾರಿಯವರು ಸೂಚಿಸಿದರು. ಮುಂದಿನ ದಿನಗಳಲ್ಲಿ ನ್ಯೂನತೆಗಳು ಬರದಂತೆ ಕಾಮಗಾರಿ ನಡೆಸಬೇಕೆಂದು ತಿಳಿಸಿದರು. ಜಿ ಪಂ ಇಂಜಿನಿಯರ್ ಗಫೂರ್.ಪಂ .ಪಂ ಸದಸ್ಯರಾದ ಗಾಯತ್ರಿ .ಜಲಜ.ಸುಮತಿ ಪದ್ಮುಂಜ.ಸುಮತಿ ಬೇಂಗಾಯಿ. ಉಪಸ್ಥಿತರಿದ್ದರು.ಪಿ ಡಿ ಓ ಗೀತಾ ಆರ್ ಸಾಲಿಯಾನ್ ರವರು ಸ್ವಾಗತಿಸಿದರು ಕಾರ್ಯದರ್ಶಿ ರಮೇಶ್ ಕೆ ಯವರು
ಧನ್ಯವಾದ ಸಲ್ಲಿಸಿದರು.

Leave a Comment

error: Content is protected !!