23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ ನಾಲ್ಕನೇ ದಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೌತಡ್ಕದಲ್ಲಿ ನಾಡಗೀತೆ ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ ಕಾರ್ಯಕ್ರಮವು ಸೆ.12 ರಂದು ಜರುಗಿತು.

ಮುಖ್ಯ ಅತಿಥಿಯಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೌತಡ್ಕದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜ್ಯೋತಿ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ವಿಜೇತ ಮಕ್ಕಳಾದ ವಿಸ್ಮಿತ, ಹೃತಿಕ್, ಶಾರ್ವರಿ, ನಿಧಾ ಫಾತಿಮಾ, ಸುಶ್ಮಿತಾ, ದೃತಿ, ಶಶಾಂಕ್, ಹೇಮಂತ್, ಪಿ ಲಾಸ್ಯ, ಹನ್ವಿಶ್, ನಾಡಗೀತೆ ರಾಷ್ಟ್ರಗೀತೆ ಬರವಣಿಗೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಜೆ ಸಿ ರಾಜಾರಾಮ ಅವರು ಗೀತೆಯನ್ನು ಮಕ್ಕಳಿಗೆ ಹೇಳಿ ಮನರಂಜನೆಗೊಳಿಸಿದರು. ಈ ಸಂದರ್ಭದಲ್ಲಿ ಘಟಕದ ಮಾರ್ಗದರ್ಶಕ ಜೋಸೆಫ್ ಪಿರೇರ, ಜೆಸ್ಸಿಂತ ಡಿಸೋಜ, ನಿಕಟ ಪೂರ್ವ ಅಧ್ಯಕ್ಷರಾದ ಜಿತೇಶ್ ಎಲ್ ಪಿರೇರ, ಯೋಜನೆ ನಿರ್ದೇಶಕರು ಕೆ ಶ್ರೀಧರ್ ರಾವ್, ಶಾಲಾ ಶಿಕ್ಷಕಿಯರಾದ ಶ್ರೀಮತಿ ಕಾಂತಿ , ಪುಷ್ಪ , ಉಪಸ್ಥಿತರಿದ್ದರು.

ಕಾರ್ಯಕ್ರಮದ ಜೆಸಿವಾಣಿ ಧನುಷ್ ಜೈನ್ ವಾಚಿಸಿದರು, ಜೆಸಿಐ ನ ಅಧ್ಯಕ್ಷರು ಸಂತೋಷ್ ಜೈನ್ ಸಾಗತಿಸಿ, ಕಾರ್ಯದರ್ಶಿ ಅಕ್ಷತ್ ರೈ ಧನ್ಯವಾದವಿತ್ತರು.

Related posts

ಕೊಯ್ಯೂರುನಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ: 5 ದಿನವಾದರೂ ದುರಸ್ತಿಯಾಗದ ವಿದ್ಯುತ್ ಕಂಬ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16902 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Suddi Udaya

ಉಜಿರೆ ರುಡ್‌ಸೆಟ್‌ನಲ್ಲಿ ಅಕೌಂಟಿಂಗ್ ಟ್ಯಾಲಿ ತರಬೇತಿ ಸಮಾರೋಪ

Suddi Udaya

ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ: ಶಾಸಕ ಹರೀಶ್ ಪೂಂಜ

Suddi Udaya

ಮುಗ್ಗ ಗುತ್ತು ಮನೆಯಲ್ಲಿ ವೈಭವದ ನವರಾತ್ರಿ ಪೂಜೆ

Suddi Udaya
error: Content is protected !!