ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

Suddi Udaya

ವೇಣೂರು: ಇಲ್ಲಿನ ಆರಕ್ಷಕ ಠಾಣೆಯಲ್ಲಿ ಮುಸ್ಲಿಮರ ಹಬ್ಬ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆಯು ಆರಕ್ಷಕ ಉಪನಿರೀಕ್ಷಕರಾದ ಶ್ರೀ ಶೈಲಾ ಮುರಗೋಡ್ ಅಧ್ಯಕ್ಷತೆಯಲ್ಲಿ ನಡೆಯಿತು.

ವೇಣೂರು ಠಾಣಾ ವ್ಯಾಪ್ತಿಯ ಮಸೀದಿ ಅಧ್ಯಕ್ಷ – ಕಾರ್ಯದರ್ಶಿಗಳು ಭಾಗವಿಸಿದ್ದರು. ಉಪನಿರೀಕ್ಷರು ಮಾತನಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮುದಾಯ ಮುಖಂಡರ ಸಹಕಾರ ಕೋರಿದರು.

ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ , ಕಟ್ಟೆ ಮಸೀದಿ ಅಧ್ಯಕ್ಷ ನವಾಜ್ , ವೇಣೂರಿನ ಹಮೀದ್, ಅಳದಂಗಡಿ ಅಸಿಫ್ ಯಾಕುಬ್ , ಕಾಶಿಪಟ್ಣದ ಪುತ್ತುಮೋನು ,ಪ್ರಮುಖರಾದ ಪತ್ರಕರ್ತ ಎಚ್ ಮಹಮ್ಮದ್ ವೇಣೂರು ,ಖಾಲಿದ್ ಪುಲಬೆ ,ಅಲಿಯಬ್ಬ ಪುಲಬೆ, ಅಶ್ರಫ್ ಶಾಂತಿನಗರ ,ಅಲ್ತಾಫ್ ಆರಂಬೋಡಿ ಸೇರಿದಂತೆ ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರಕ್ಷಕ ಎಚ್.ಸಿ ಪಂಪಾವತಿ ಧನ್ಯವಾದವಿತ್ತರು

Leave a Comment

error: Content is protected !!