ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿಯಲ್ಲಿ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ

Suddi Udaya

ಬೆಳ್ತಂಗಡಿ : ಮಿಲಾದ್ ನೆಬಿ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಧ್ಯಕ್ಷ ನಝೀರ್ ಬಿ.ಎ ಯವರ ಅಧ್ಯಕ್ಷತೆಯಲ್ಲಿ ಶಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಯಾಕೂಬ್ ಮಾತನಾಡಿದರು. ಖತೀಬರಾದ ಹನೀಫ್ ಫೈಝೀ ದುವಾ ನೆರವೇರಿಸಿದರು. ಅತಿಥಿಗಳಾಗಿ ಕಾರ್ಯದರ್ಶಿ ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿ ಇಸ್ಮಾಲಿ ಐ.ಬಿ, ಸಮಿತಿ ಸದಸ್ಯರಾದ ಶೇಕುಞ್ಞ, ಇಬ್ರಾಹಿಂ ಕೋಡಿಸಭೆ, ಅಬ್ದುಲ್ ರಹಮಾನ್ ಕೋಡಿಸಭೆ, ಇಸುಬು ಸಂಜಯನಗರ, ಅಬ್ಬಾಸ್ ಸೌದಿ ಅರೇಬಿಯಾ, ಸ್ವಲಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಶರೀಫ್, ಕಾರ್ಯದರ್ಶಿ ಹೈದರ್ ಬಿ.ಕೆ, ಕೋಶಾಧಿಕಾರಿ ಫೈಝಲ್ ಬೆಳ್ತಂಗಡಿ, ಖಿಲರ್ ಜುಮ್ಮಾ ಮಸೀದಿ ಇದರ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ರಝಾಕ್ ಬಿ.ಎಚ್ ಸ್ವಾಗತಿಸಿ, ಅಬ್ದುಲ್ ರಹಮಾನ್ ಮುಸ್ಲಿಯಾರ್ ವಂದಿಸಿದರು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Leave a Comment

error: Content is protected !!