ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ: ಅದ್ವಿಕ ಕೆ.ಪಿ. ರವರಿಗೆ ಚಿನ್ನದ ಪದಕ

Suddi Udaya

ಬೆಳ್ತಂಗಡಿ: ಮೈಸೂರು ಚಾಮುಂಡಿ ವಿಹಾರ ಮೈದಾನದಲ್ಲಿ ಸೆ.17ರಂದು ಮುಕ್ತಾಯಗೊಂಡ ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 14ರ ವಯೋಮಿತಿಯ ಬಾಲಕಿಯರಲ್ಲಿ ಸೈಂಟ್ ಆಗ್ನೇಸ್ ಶಾಲೆಯ ೭ನೇ ತರಗತಿಯ ಅದ್ವಿಕ ಕೆ.ಪಿ. ರವರು ಟ್ರಯಥ್ಲಾನ್ (Trayathlon) ಬಿ ವಿಭಾಗದಲ್ಲಿ 2473 ಅಂಕ ಪಡೆದು ಚಿನ್ನದ ಪದಕ ಪಡೆದು ಅತ್ಯುತ್ತಮ ಅಥ್ಲೆಟ್ ಪ್ರಶಸ್ತಿ ಪಡೆದು, ಅ.೧೯ರಿಂದ ಹೈದರಾಬಾದ್‌ನ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಡಾ. ಅರುಣ್ ಕುಮಾರ್ ಮತ್ತು ಗೀತಾ ಪಾಲೇರ್ ದಂಪತಿ ಪುತ್ರಿ. ದಿನೇಶ್ ಕುಂದರ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವೇಣೂರು ಕುಂಡದಬೆಟ್ಟು ದಿ. ನಾರಾಯಣ ಮತ್ತು ವಾರಿಜಾ ದಂಪತಿಗಳ ಮೊಮ್ಮಗಳು.

Leave a Comment

error: Content is protected !!