ನಿಡ್ಲೆ: ತಲೇಕಿ ಎಂಬಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

Suddi Udaya

ನಿಡ್ಲೆ : ಇಲ್ಲಿಯ ತಲೇಕಿ ಸತ್ಯವತಿ ಎಂಬವರ ತೋಟಕ್ಕೆ ಸೆ.18ರಂದು ರಾತ್ರಿ ಕಾಡಾನೆ ದಾಳಿ ಮಾಡಿ ಅಡಿಕೆ, ಬಾಳೆ ಗಿಡಗಳಿಗೆ ಹಾನಿ ಮಾಡಿದೆ. ಇದು ಇತ್ತೀಚೆಗೆ ಮೂರನೇ ಬಾರಿ ಈ ತೋಟಕ್ಕೆ ದಾಳಿಯಿಟ್ಟಿರುವುದು.

ಹಲವು ಸಮಯಗಳಿಂದ ಧರ್ಮಸ್ಥಳ, ಪುದುವೆಟ್ಟು, ನಿಡ್ಲೆ ಪರಿಸರದಲ್ಲಿ ತಿರುಗಾಡುತ್ತಿರುವ ಕಾಡಾನೆ ರಾತ್ರಿ ಸಮಯ ತೋಟಕ್ಕೆ ದಾಳಿಯಿಟ್ಟು ಹಾಳುಗೆಡಹುತ್ತಿದೆ. ಆದಷ್ಟು ಬೇಗ ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೇಂಬುದು ನಾಗರಿಕರ ಆಗ್ರಹವಾಗಿದೆ.

Leave a Comment

error: Content is protected !!