April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

ಬೆಳ್ತಂಗಡಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅವರ ಆದರ್ಶಪ್ರಾಯವಾದ ಜೀವಮಾನದ ಸಲುವಾಗಿ ಕರುಣಾಶ್ರಯ ಸೇವಾ ಟ್ರಸ್ಟ್, ಮಂಗಳೂರು ವಾರದ ಒಂದು ದಿನದ ಸೇವಾ ಕಾರ್ಯಕ್ರಮ ಸೇವೆಯ ಸಾಥ್ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೇ ಸೇವಾ ಕಾರ್ಯಕ್ರಮವಾಗಿ ಬಾಲ್ಯದಲ್ಲಿ ಆದ ಆಚಾತುರ್ಯದಿಂದ ಕೈ ಕಳೆದುಕೊಂಡು ಅಂಗವೈಕಲ್ಯವನ್ನ ಒಂದು ವೈಕಲ್ಯವೇ ಅಲ್ಲ ಎಂದು ತನ್ನ ಬದುಕಿನುದ್ದಕ್ಕೂ ಹೋರಾಟದ ಜೀವನದಿಂದ ಆದರ್ಶರಾದ ಸಂಧ್ಯಾ ಸುವರ್ಣ ಇವರನ್ನ ಗೌರವಿಸುವ ಮೂಲಕ ಮತ್ತು ಎರಡನೇ ಸೇವಾ ಕಾರ್ಯಕ್ರಮವಾಗಿ ಹೊನ್ನಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೃದ್ಧರ ಸೇವಾಶ್ರಮ ಶ್ರೀ ಗುರು ಚೈತನ್ಯ ಸೇವಾಶ್ರಮ ಗುಂಡೂರಿಗೆ ದಿನಸಿ ವಸ್ತುಗಳನ್ನ ನೀಡುವ ಮುಖೇನ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಉಪಾಧ್ಯಕ್ಷ ಪ್ರಮೋದ್ ಶೆಟ್ಟಿ, ಕೋಶಾಧಿಕಾರಿ ನಿತಿನ್ ವಿ ಶೆಟ್ಟಿ, ಕಾರ್ಯದರ್ಶಿ ಸುಮಲತಾ, ಜೊತೆ ಕಾರ್ಯದರ್ಶಿ ಪ್ರಶಾಂತ್, ಟ್ರಸ್ಟಿಗಳಾದ ಆಶಾ ಡಿ ಸುಧೀರ್, ಯಶವಂತ್, ಸೋಮನಾಥ, ಸುಶ್ಮೀತಾ ಭಾಗವಹಿಸಿದ್ದರು.

Related posts

ಉಜಿರೆ ಗ್ರಾ.ಪಂ. ಅಮೃತ ಸಭಾಂಗಣ ಉದ್ಘಾಟನೆ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ

Suddi Udaya

ಓಡಿಲ್ನಾಳ : ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ಧ್ವಜಾರೋಹಣ, ಪ್ರಥಮ ಜಾತ್ರೆ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮತದಾನ ಕೇಂದ್ರಗಳಿಗೆ ಭೇಟಿ

Suddi Udaya

ಕಣಿಯೂರು ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆ

Suddi Udaya

ನಾಪತ್ತೆಯಾಗಿದ್ದ ತೋಟತ್ತಾಡಿ ಯುವಕನ ಮೃತದೇಹ ಅಣಿಯೂರು ನದಿಯಲ್ಲಿ ಪತ್ತೆ

Suddi Udaya
error: Content is protected !!