23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

ಬೆಳ್ತಂಗಡಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅವರ ಆದರ್ಶಪ್ರಾಯವಾದ ಜೀವಮಾನದ ಸಲುವಾಗಿ ಕರುಣಾಶ್ರಯ ಸೇವಾ ಟ್ರಸ್ಟ್, ಮಂಗಳೂರು ವಾರದ ಒಂದು ದಿನದ ಸೇವಾ ಕಾರ್ಯಕ್ರಮ ಸೇವೆಯ ಸಾಥ್ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೇ ಸೇವಾ ಕಾರ್ಯಕ್ರಮವಾಗಿ ಬಾಲ್ಯದಲ್ಲಿ ಆದ ಆಚಾತುರ್ಯದಿಂದ ಕೈ ಕಳೆದುಕೊಂಡು ಅಂಗವೈಕಲ್ಯವನ್ನ ಒಂದು ವೈಕಲ್ಯವೇ ಅಲ್ಲ ಎಂದು ತನ್ನ ಬದುಕಿನುದ್ದಕ್ಕೂ ಹೋರಾಟದ ಜೀವನದಿಂದ ಆದರ್ಶರಾದ ಸಂಧ್ಯಾ ಸುವರ್ಣ ಇವರನ್ನ ಗೌರವಿಸುವ ಮೂಲಕ ಮತ್ತು ಎರಡನೇ ಸೇವಾ ಕಾರ್ಯಕ್ರಮವಾಗಿ ಹೊನ್ನಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೃದ್ಧರ ಸೇವಾಶ್ರಮ ಶ್ರೀ ಗುರು ಚೈತನ್ಯ ಸೇವಾಶ್ರಮ ಗುಂಡೂರಿಗೆ ದಿನಸಿ ವಸ್ತುಗಳನ್ನ ನೀಡುವ ಮುಖೇನ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಉಪಾಧ್ಯಕ್ಷ ಪ್ರಮೋದ್ ಶೆಟ್ಟಿ, ಕೋಶಾಧಿಕಾರಿ ನಿತಿನ್ ವಿ ಶೆಟ್ಟಿ, ಕಾರ್ಯದರ್ಶಿ ಸುಮಲತಾ, ಜೊತೆ ಕಾರ್ಯದರ್ಶಿ ಪ್ರಶಾಂತ್, ಟ್ರಸ್ಟಿಗಳಾದ ಆಶಾ ಡಿ ಸುಧೀರ್, ಯಶವಂತ್, ಸೋಮನಾಥ, ಸುಶ್ಮೀತಾ ಭಾಗವಹಿಸಿದ್ದರು.

Related posts

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನಾಚರಣೆ

Suddi Udaya

ಸೌತಡ್ಕ ಕ್ಷೇತ್ರಕ್ಕೆ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ದಿನಕರ್ ತೂಗುದೀಪ ದಂಪತಿ ಭೇಟಿ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ವಿಕಲಚೇತನರ ಗ್ರಾಮ ಸಭೆ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಶೀಲಾವತಿ ನಿಧನ

Suddi Udaya

ಶಾಸಕರ ಬಂಧನಕ್ಕೆ ಹೋದ ಪೊಲೀಸರು- ಸಂಜೆಯವರೆಗೆ ಬಿಗ್ ಹೈಡ್ರಾಮ;: ಶಾಸಕ ಹರೀಶ್ ಪೂಂಜರ ಬಂಧನ ಕೈ ಬಿಟ್ಟು ಹಿಂದಿರುಗಿದ ಪೊಲೀಸರು

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರು ಪ್ರ. ಕಾರ್ಯದರ್ಶಿಯಾಗಿ ಕೆ. ಬಾಲಕೃಷ್ಣ ಗೌಡ ಕಲ್ಲಾಜೆ ಆಯ್ಕೆ

Suddi Udaya
error: Content is protected !!