ಎಂಟು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ‌ ಆರೋಪಿಯಾಗಿ, ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಡೆನ್ನಿ ಜೋಸೆಫ್ @ ಅಂತೋನಿ

ಚೆಟ್ಟರಿಕಲ್ ಮನೆ, ಹೊಸದುರ್ಗ ತಾಲೂಕು, ಕಾಸರಗೋಡು, ಕೇರಳ, ಎಂಬಾತನನ್ನು, ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕ ಬಿ.ಜಿ ಸುಬ್ಬಾಪುರ ಮಠ, ಉಪ ನೀರಿಕ್ಷಕ ಮುರಳೀಧರ್ ರವರ ನಿರ್ದೇಶನದಂತೆ, ಠಾಣಾ ಹೆಚ್. ಸಿಗಳಿದ‌ ವ್ರಷಭ, ಪಳನಿವೇಲು ಮತ್ತು ಪಿ.ಸಿ ಮುನಿಯ ನಾಯ್ಕ ರವರುಗಳು ಸೆ .21 ರಂದು ಬೆಳ್ತಂಗಡಿ ತಾಲೂಕು, ಉಜಿರೆ ಎಂಬಲ್ಲಿ ದಸ್ತಗಿರಿ ಮಾಡಿ, ಬೆಳ್ತಂಗಡಿ ನ್ಯಾಯಾಲಯ ಮುಂದೆ ಹಾಜರಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Leave a Comment

error: Content is protected !!