ಫೇಸ್‌ಬುಕ್ ಖಾತೆಯಲ್ಲಿ ಪೊಸ್ಟ್ ಹಾಕಿ ಮಾನಹಾನಿ ಆರೋಪ:ಯುವತಿ ದೂರು: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಫೇಸ್‌ಬುಕ್ ಖಾತೆಯಲ್ಲಿ ತನ್ನ ಹಾಗೂ ಮನೆಯವರ ಮತ್ತು ಮದುವೆ ಆಗುವ ಹುಡುಗನ ಬಗ್ಗೆ ಪೋಸ್ಟ್ ಹಾಕಿ ಮಾನಹಾನಿ ಮಾಡಲಾಗಿದೆ ಎಂದು ತೋಟತ್ತಾಡಿಯ ಯುವತಿಯೋರ್ವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಯುವತಿ ನೀಡಿದ ದೂರಿನಲ್ಲಿ ತಾನು ವ್ಯಾಸಂಗ ಮಾಡುತ್ತಿದ್ದು, ಪ್ರಜ್ವಲ್ ಕೆ.ವಿ ಗೌಡ ಎಂಬವರ ಜೊತೆ ಮದುವೆ ನಿಶ್ಚಯವಾಗಿದೆ. ಶುಭ ರೈ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ನನ್ನ ಹಾಗೂ ಮನೆಯವರ ಮತ್ತು ಮದುವೆ ನಿಶ್ಚಯವಾದ ಹುಡುಗನ ಬಗ್ಗೆ ತನ್ನ ಖಾತೆಯಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿರುವುದಲ್ಲದೆ ಪೋಟೋಗಳನ್ನು ನಕಲಿ ಖಾತೆಯಲ್ಲಿ ಹಾಕುತ್ತಿದ್ದು, ಇದರಿಂದಾಗಿ ನನ್ನ ಹಾಗೂ ಮನೆಯವರ ಮಾನಹಾನಿಯಾಗಿದೆ ಎಂದು ದೂರಿಯಲ್ಲಿ ಯುವತಿ ಆರೋಪಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

error: Content is protected !!