ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಬೆಳ್ತಂಗಡಿ :ಬೆಳ್ತಂಗಡಿ ಲಯನ್ಸ್ ಸೇವಾ ಸಂಸ್ಥೆಯ ವತಿಯಿಂದ ಸೆ24ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸೇವಾ ಚಟುವಟಿಕೆಯಾದ ಭಾಸ್ಕರ್ ಗಾಣಿಗ ಇವರಿಗೆ ತುರ್ತಾಗಿ ಗಾಲಿಕುರ್ಚಿಯ ಅಗತ್ಯವಿರುದನ್ನು ಮನಗಂಡು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಾನಂದ ಗೌಡ ಇವರ ಶಿಪಾರಿಸ್ಸಿನ ಮೇರೆಗೆ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ. ಪ್ರಾಂತ್ಯ ಮಾಜಿ ಅಧ್ಯಕ್ಷರಾದ ನಿತ್ಯಾನಂದನಾವರ. ವಸಂತ್ ಶೆಟ್ಟಿ. ರಾಜು ಶೆಟ್ಟಿ. ಮಾಜಿ ಅಧ್ಯಕ್ಷರಾದ ಹೇಮಂತ ರಾವ್. ರಾಮಕೃಷ್ಣ ಗೌಡ. ಅಶೋಕ್ ಕುಮಾರ್ ಬಿಪಿ. ವಲಯಅಧ್ಯಕ್ಷ ಉಮೇಶ್ ಶೆಟ್ಟಿ. ಸ್ಥಾಪಕ ಸದಸ್ಯರಾದ ಎಂ ಜಿ ಶೆಟ್ಟಿ
ಸದಸ್ಯರಾದ ರಘುರಾಮಶೆಟ್ಟಿ ಜಯಂತ ಶೆಟ್ಟಿ ನಾಣ್ಯ್ ಪ್ಪ ನಾಯ್ಕ. ಕೃಷ್ಣ ಆಚಾರ್ ಉಪಸ್ಥಿತದರು

Leave a Comment

error: Content is protected !!