24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

ಬಂದಾರು: ಶಾಲಾ ಮಕ್ಕಳು, ಕೆಲಸಕ್ಕೆ ತೆರಲುವ ಪ್ರಯಾಣಿಕರು ಸರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸು ವ್ಯವಸ್ಥೆ ಇಲ್ಲದೆ ಬಂದಾರುವಿನಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಂದಾರು ಪಂಚಾಯತ್ ಬಳಿಯಿಂದ ಬೆಳಗ್ಗೆ 7.00 ಗಂಟೆಗೆ ಬೈಪಾಡಿ – ಕೊಯ್ಯೂರು – ಬೆಳ್ತಂಗಡಿ ಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ಒಂದು ದಿನ ಬರುತ್ತೆ ಇನ್ನೋಂದು ದಿನ ಇರೋದಿಲ್ಲ. ಕೊಯ್ಯೂರು ಪಿಜಕ್ಕಳ ಬಳಿ ಗೇರ್ ಸಮಸ್ಯೆ ಯಿಂದ ಬಾಕಿಯಾಗೋದು ಇದು ಮಾಮೂಲು ಆಗಿದೆ.

ಸಂಜೆ 4.15 ಗಂಟೆಗೆ ಬೆಳ್ತಂಗಡಿಯಿಂದ , ಕೊಯ್ಯುರು, ಬೈಪಾಡಿ ಮಾರ್ಗವಾಗಿ ಬಂದಾರು ಪಂಚಾಯತ್ ಬಳಿಗೆ ಬಂದು ತಿರುಗಿ ವಾಪಾಸ್ ಆಗುತ್ತದೆ. ಆದ್ರೆ ಕೆಲವೊಂದು ದಿನದ ಸಂಚಾರಕ್ಕೆ ಯೋಗ್ಯವಿಲ್ಲದ ಬಸ್ ಕಳುಹಿಸಿ ಶಾಲಾ ಮಕ್ಕಳನ್ನು ಬೈಪಾಡಿ ಬಳಿ ಹಾಗೂ ಬಂದಾರು ಮಿಲ್ಕ್ ಡೈರಿ ಇಳಿಸಿ ಹೋಗ್ತಾರೆ ಕೇಳಿದ್ರೆ ಅಲ್ಲಿ ಹೋಗೋಕೆ ಆಗಲ್ಲ ಅಂತ ಹೇಳ್ತಾರೆ ಉತ್ತರ ನೀಡುತ್ತಾರೆ.

ಸಂಜೆ ಕಾಂತಾಜೆ ಕೊಯ್ಯುರು ಬಳಿ ಬಸ್ ಮುಂದೆ ಚಳಿಸದೇ ಮಕ್ಕಳಲ್ಲೆ ದುಡಿಸಿದ ಪ್ರಸಂಗ ನಡೆದಿದೆ. ಎಷ್ಟು ದೂಡಿದ್ರು ಬಸ್ ಮುಂದೆ ಸಾಗಲ್ಲ ಕೊನೆಗೆ ಅಲ್ಲೇ ಜಖಂ ಆಗುತ್ತೆ, ಅದ್ರಲ್ಲೇ ಬoದಿರುವ ಮಕ್ಕಳ ಕಥೆ ಅಯೋಮಯವಾಗುತ್ತದೆ.

ಇತ್ತೀಚಿಗೆ ಕೊಯ್ಯುರು ಕಾಲೇಜು ಬಳಿ ಬಸ್ ನ ಗೇರ್ ಬೀಳೋದಿಲ್ಲ ಅಂತ ಹೇಳಿ ಬೈಪಾಡಿ ತನಕ ಬಸ್ ಬಂದು ಅಲ್ಲೇ ಮಕ್ಕಳನ್ನು ಇಳಿಸಿ ಹೋಗಿದ್ದಾರೆ .ಶಾಲಾ, ಕಾಲೇಜು, ವಿದ್ಯಾರ್ಥಿಗಳು, ಉದ್ಯೋಗ ಕ್ಕೆ ತೆರಳುವವರು, ಪ್ರಯಾಣಿಕರ ಸಮಸ್ಯೆಗೆ ಇತ್ಯರ್ಥ ಯಾವಾಗ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಬೆಳ್ತಂಗಡಿ: ವಾಣಿ ಕಾಲೇಜಿನ ವಾಣಿಜ್ಯ ಸಂಘದಿಂದ “ಯಶಸ್ಸಿನ ಮಂತ್ರ” ತರಬೇತಿ ಕಾರ್ಯಾಗಾರ

Suddi Udaya

ಪಣಕಜೆ:ಆಸರೆ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆ: ಆರೋಗ್ಯ ತಪಾಸಣೆ, ಪರಿಸರದಲ್ಲಿ ಸ್ವಚ್ಚತೆ ಕಾಪಾಡುವುದರ ಬಗ್ಗೆ ಮಾಹಿತಿ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಸ್ಪೂರ್ತಿ 2K25 ಕಾಮರ್ಸ್ ಫೆಸ್ಟ್

Suddi Udaya

ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರದ ದರ್ಶನ ಪಡೆದ ಶಾಸಕ ಹರೀಶ್ ಪೂಂಜ

Suddi Udaya

ಬಳಂಜ- ಅಳದಂಗಡಿ ಸಂಪರ್ಕಿಸುವ ಬಾವಲಿಗುಂಡಿ ಬಳಿ ಗುಡ್ಡ ಕುಸಿತ, ಸಂಚಾರ ಸ್ಥಗಿತ

Suddi Udaya

ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ ನಿಧನ

Suddi Udaya
error: Content is protected !!