ಬೆಳ್ತಂಗಡಿ: ಎಸ್ ಬಿ ಐ ಲೈಫ್ ಇನ್ಸೂರೆನ್ಸ್ ನಿಂದ ವಿಮಾ ಪರಿಹಾರ

Suddi Udaya

ಬೆಳ್ತಂಗಡಿ ನಿವಾಸಿ ಜಯರಾಜ್ ಹೆಗಡೆ ಇವರು ನಡ ಗ್ರಾಮ ಪಂಚಾಯತಿಯಲ್ಲಿ ಉಗ್ರಾಣಿಯಾಗಿ ಕೆಲಸ ಮಾಡುತ್ತಿದ್ದು, ಜೂನ್ 08ರಂದು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಖಾಸಗಿ ಬಸ್ಸು ಅಪಘಾತವಾಗಿ ಸಾವನ್ನಪ್ಪಿದ್ದರು.

ಸದ್ರಿಯವರು ಎಸ್ ಬಿ ಐ ಲೈಫ್ ವಿಮಾ ಸಲಹೆಗಾರ ಮಂಜುನಾಥ್ ಗುಡಿಗಾರ್ ರವರಲ್ಲಿ ವಿಮೆ ಮಾಡಿಸಿದ್ದು, ಅವರ ಕುಟುಂಬಕ್ಕೆ ರೂ.5 ಲಕ್ಷ ವಿಮಾ ಮೊತ್ತವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಬಿ ಐ ಲೈಫ್ ಬ್ರಾಂಚ್ ಮೆನೇಜರ್ ಸಿದ್ದಪ್ಪ ಸ್ವಾಮಿ, ಬಿಸಿನೆಸ್ ಮ್ಯಾನೇಜರ್ ಗಿಲ್ಬರ್ಟ್ ಪಿಂಟೋ ಮತ್ತು ವಿಮಾ ಸಲಹೆಗಾರ ಮಂಜುನಾಥ್ ಗುಡಿಗಾರ್ ಉಪಸ್ಥಿತರಿದ್ದರು.

Leave a Comment

error: Content is protected !!