ವೇಣೂರು ತುಳುನಾಡ ಜವನೆರ್ ಹೆಚ್.ಪಿ.ಎಲ್ ಸೀಸನ್ -7 ರ ಪದಾಧಿಕಾರಿಗಳ ಆಯ್ಕೆ

Suddi Udaya

/05/nisarga-curtain-online-advt-copy.jpg"/>

ವೇಣೂರು ತುಳುನಾಡ ಜವನೆರ್ ಹೆಚ್.ಪಿ.ಎಲ್ ಸೀಸನ್ -7 ಇದರ ಮೊದಲ ಹಂತದ ಸಭೆಯು ನಡೆಯಿತು.

ಸಭೆಯಲ್ಲಿ ಪಂದ್ಯಾಟದ ಪೂರ್ವಭಾವಿಯಾಗಿ ಡಿ.1 ರಂದು ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸಿ, ಪಂದ್ಯಾಟವು ಡಿಸೆಂಬರ್ 28 ಹಾಗೂ 29 ರಂದು ಇಂದಿರಾಗಾಂಧಿ ಕ್ರೀಡಾಂಗಣ ಕುಕ್ಕೇಡಿಯಲ್ಲಿ ನಡೆಸಲಾಗುವುದು, ಒಟ್ಟು 12 ತಂಡಗಳ ಪಂದ್ಯಾಟ ನಡೆಸುವುದರ ಬಗ್ಗೆ ತೀರ್ಮಾಣಿಸಲಾಯಿತು.

ಈ ವೇಳೆ ನೂತನವಾಗಿ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ರವಿ ಉಳ್ತುರು, ಅಧ್ಯಕ್ಷರಾಗಿ ರೂಪೇಶ್. ಕೆ, ಕಾರ್ಯದರ್ಶಿಯಾಗಿ ಸಂದೀಪ್ ಆಚಾರ್ಯ, ಉಪಾಧ್ಯಕ್ಷರಾಗಿ ನವೀನ್ ಕೋಟ್ಯಾನ್, ಮಣಿ ಬಸವಗುಡಿ, ಜೊತೆ ಕಾರ್ಯದರ್ಶಿಯಾಗಿ ಚರಣ್ ರನ್ನಡಿ, ಆಕ್ಷಿತ್ ವೇಣೂರು, ಕೋಶಾಧಿಕಾರಿಯಾಗಿ ಸುದೀಪ್ ಪಟವರ್ಧನ್, ಗೌರವ ಸಲಹೆಗಾರರಾಗಿ ಜಯರಾಮ್ ಗರ್ಡಾಡಿ, ರೂಪೇಶ್ ಜೈನ್ ವೇಣೂರು,ಅಶ್ವಿನ್ ಕೇದಾಗೆ, ಪ್ರಮೋದ್ ಶೆಟ್ಟಿ, ಅನಿಲ್ ಶೆಟ್ಟಿ ಪಡಂಗಡಿ ಬಾಲಕೃಷ್ಣ ದೇವಾಡಿಗ, ರಕ್ಷಿತ್ ಬಜಿರೆ, ಸಂಜಿತ್ ರನ್ನಡಿ, ಪ್ರದೀಪ್ ಕಾಶಿಪಟ್ಣ, ಅವಿನಾಶ್ ಸುವರ್ಣ ಆಯ್ಕೆಯಾದರು.

Leave a Comment

error: Content is protected !!