23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹೊಸಖಂಡ ಎಂಬಲ್ಲಿನ ವಿಕಲಚೇತನ ಫಲಾನುಭವಿಯಾದ ಪಕೀರ ಮುಗೇರಾ ಇವರ ಮಾಸಿಕ ಪೋಷಣಾಭತ್ಯೆಯು ಆಧಾರ್ ಚೀಟಿಯ ತಾಂತ್ರಿಕ ದೋಷದಿಂದ 2 ತಿಂಗಳಿಂದ ಸ್ಥಗಿತ ವಾಗಿರುದನ್ನು ತಿಳಿದುಕೊಂಡ ಉಜಿರೆ ಪಂಚಾಯತ್ ನ ಗ್ರಾಮೀಣ ವಿಆರ್.ಡಬ್ಲ್ಯೂ ಆದಂತಹ ವಿಪುಲ್ ಪೂಜಾರಿ ಇವರು ಸಂಬಂಧಿಸಿದ ಪಲಾನುಭವಿಯ ಆಧಾರ್ ಚೀಟಿಯ ತಾಂತ್ರಿಕ ದೋಷವನ್ನು ಸರಿಪಡಿಸಲು ಸಹಾಯ ಮಾಡುವಂತೆ ಕೋರಲು ಮನವಿ ಪತ್ರ ನೀಡಲು ಸೆ.30 ರಂದು ಸೂಚಿಸಿದ ಹಿನ್ನಲೆಯಿಂದ ಅ. 01 ರಂದು ಪಲಾನುಭವಿಯ ಬೇಡಿಕೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹಾಗೂ ಪಂಚಾಯತ್ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯಾದ ಭವಾನಿ ಶಂಕರ್ ಇವರ ಮೆಚ್ಚುಗೆಯೊಂದಿಗೆ ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಭ್ಯಾಪ್ಟಿಸ್ಟ್ ಇವರ ಸಲಹೆ ಸೂಚನೆಯಂತೆ ಜಿಲ್ಲಾಧಿಕಾರಿಯವರ ಕಛೇರಿಯ ಆಧಾರ್ ಕೇಂದ್ರಕ್ಕೆ ಫಲಾನುಭವಿಯವರನ್ನು ಕರೆ ತಂದು ಪಕೀರಾ ಮುಗೇರಾ ಇವರ ಆಧಾರ್ ನ್ನು ಸರಿಪಡಿಸಲಾಯಿತು.

ಈ ಸಂದರ್ಭದಲ್ಲಿ ಚಿರಂಜೀವಿ, ಗ್ರಾಮೀಣ ವಿ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತ್, ಕಣಿಯೂರು ಇವರು ಕೂಡ ಜೊತೆಗಿದ್ದು ಸಹಕರಿಸಿದರು.

Related posts

ರಾ.ಹೆ. ಲಾಯಿಲ ಬಳಿ ತಿರುವಿನ ಸೂಚನ ಫಲಕ ಕಾಣೆ; ಸುದ್ದಿ ಉದಯ ಜನಧ್ವನಿ

Suddi Udaya

ಮಾಲಾಡಿ: ಪೆರ್ಡೆ ಕ್ರಾಸ್ – ಊರ್ಲ ರಸ್ತೆ ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ

Suddi Udaya

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ: ಎಸ್ ಎಸ್ ಎಲ್ ಸಿ ಸಾಧಕ ಚಿನ್ಮಯಿ ಜಿ.ಕೆ ರವರಿಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಶ್ರೀ ಧ. ಆಂ.ಮಾ. ಶಾಲೆಯಲ್ಲಿ ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಣೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ

Suddi Udaya
error: Content is protected !!