ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ ವಿನೂತನವಾಗಿ ಗಾಂಧಿ ಜಯಂತಿ ಆಚರಣೆ

Suddi Udaya

/05/nisarga-curtain-online-advt-copy.jpg"/>

ಗುರುವಾಯನಕೆರೆ: ಅ. 2ರಂದು ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ ವಿನೂತನವಾಗಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಗಾಂಧಿಜೀ ಅವರ ಭಾವ ಚಿತ್ರದೊಂದಿಗೆ ದೀಪ ಪ್ರಜ್ವಲನ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮವನ್ನು ಶೈಕ್ಷಣಿಕ ನಿರ್ದೇಶಕರು ಗಂಗಾಧರ ಇ ಮಂಡಗಳಲೆ, ಆಡಳಿತ ಅಧಿಕಾರಿ ಚಂದ್ರಶೇಖರ ಗೌಡ, ಪ್ರಾಂಶುಪಾಲರು ಅರುಣ್ ಕ್ಯಾಸ್ಟಲಿನೊ, ಉಪಪ್ರಾಂಶುಪಾಲರು ಜಯೇಂದ್ರ ಬಂದ್ಯಾನ್ ಮತ್ತು ವಿದ್ಯಾರ್ಥಿಗಳು ನೆರವೇರಿಸಿದರು.
ಗಾಂಧಿ ಜೀವನ ತತ್ವ ಮತ್ತು ದೇಶ ಅಭ್ಯುದಯದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ತತ್ವದ ಕುರಿತು ಶಿಕ್ಷಣ ನಿರ್ದೇಶಕರು ಮಾತನಾಡಿದರು. ನಂತರ ಗಾಂಧಿ ಸ್ಮ್ರತಿ ಹಾಗೂ ವಿವಿಧ ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ವಗ೯ದವರು ನೆಲದಲ್ಲಿ ಅಸೀನರಾಗಿ 1 ಗಂಟೆಯ ವರೆಗೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರು ನೀಲಕಂಠ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!