ಕಣಿಯೂರು ಗ್ರಾ.ಪಂ. ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

/05/nisarga-curtain-online-advt-copy.jpg"/>

ಕಣಿಯೂರು : ಗ್ರಾಮ ಪಂಚಾಯತ್ ಕಣಿಯೂರು ಸಭಾಂಗಣದಲ್ಲಿ ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು ಹಾಗೂ ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾವಿಧಿ ಬೋಧನೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಹಾಗೂ ಸ್ವಚ್ಛತೆಯೇ ಸೇವಾ ಆಂದೋಲನ ಕಾರ್ಯಕ್ರಮದಡಿ ಯಲ್ಲಿ ಕಸ ವಿಲೇಯವರಿಗೆ ಚಾಲನೆ ನೀಡಲಾಯಿತು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2025-26 ನೇ ಸಾಲಿನ ಕಾಮಗಾರಿ ಗಳ ಅರ್ಜಿಸಲ್ಲಿಸುವ ಕುರಿತು ತಿಳಿಸಲಾಯಿತು..ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಗಾಯತ್ರಿ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಮತಿ ಬೆಂಗಾಯಿ, ಸಂಜೀವಿನಿ ಒಕ್ಕೂಟ ಮೇಲ್ವಿಚಾರಕರಾದ ಶ್ರೀಮತಿ ರತ್ನಾವತಿ, ಶ್ರೀಮತಿ ಲೋಕಮ್ಮ, ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರದೀಪ್ ನಾಯ್ಕ, ಉಮೇಶ್ ನಾಯ್ಕ, ಶ್ರೀಮತಿ ಲಕ್ಷ್ಮೀ, ವಿ.ಆರ್.ಡಬ್ಲು, ಚಿರಂಜೀವಿ ಶೆಟ್ಟಿ, ಶ್ರೀಮತಿ ಸುನಂದ, ಹಾಜರಿದ್ದರು.

Leave a Comment

error: Content is protected !!