ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ಬಂಗೇರ ದಳದ ವತಿಯಿಂದ ಗಾಂಧಿಜಯಂತಿಯ ಪ್ರಯುಕ್ತ ಸ್ವಚ್ಚತಾ ಹೀ ಭಾರತ ಅಭಿಯಾನ

Suddi Udaya

ಬೆಳ್ತಂಗಡಿ : ಶ್ರೀಗುರುದೇವ ಪದವಿ ಮತ್ತು ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಎನ್ ಎಸ್ ಎಸ್ ಘಟಕ ಮತ್ತು ರೋವರ್ಸ್ ಹಾಗೂ ರೇಂಜರ್ಸ್ ಬಂಗೇರ ದಳದ ವತಿಯಿಂದ ಗಾಂಧಿಜಯಂತಿಯ ಪ್ರಯುಕ್ತ ಕಾಲೇಜು ಆವರಣದಲ್ಲಿ ಸ್ವಚ್ಚತಾ ಹೀ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಸಮಿತಿಯ ಸದಸ್ಯೆ ಶ್ರೀಮತಿ ಬಿನುತ ವಿ ಬಂಗೇರ ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕೇಶ್ ಕುಮಾರ್, ಉಪಪ್ರಾಂಶುಪಾಲರು, ಪದವಿ ವಿಭಾಗದ ಎನ್.ಎಸ್.ಎಸ್ ಶಿಬಿರಾಧಿಕಾರಿಗಳಾದ ಬಿ ಎ ಶಮಿಯುಲ್ಲ ,ರೋವರ್ಸ್-ರೇಂಜರ್ಸ್ ಘಟಕಾಧಿಕಾರಿಗಳಾದ ಶುಭಲಕ್ಷ್ಮಿ ,ರಾಕೇಶ್ ಕುಮಾರ್ ಪದವಿ ವಿಭಾಗದ ಎನ್.ಎಸ್.ಎಸ್ ಘಟಕದ ಸಹಶಿಬಿರಾಧಿಕಾರಿಗಳಾದ ಸತೀಶ್ ಸಾಲ್ಯಾನ್, ಶ್ವೇತಾ ,ಪದವಿ ಪೂರ್ವ ವಿಭಾಗದ ಶಿಬಿರಾಧಿಕಾರಿಗಳಾದ ಶಿವರಾಜ್ ಗಟ್ಟಿ, ಚಂದನಾ, ಸೌಜನ್ಯ ,ಕಾಲೇಜಿನ ಶಾರೀರಿಕ ನಿರ್ದೇಶಕ ರವಿರಾಮ ಶೆಟ್ಟಿ, ಬೆಳ್ತಂಗಡಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಅನೂಪ್ ಬಂಗೇರ, ಕಾಲೇಜಿನ ಸಿಬ್ಬಂದಿ ಜನಾರ್ಧನ ಕುಲಾಲ್, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.

Leave a Comment

error: Content is protected !!