ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ: ಎನ್ ಎಸ್ ಎಸ್ ಮತ್ತು ಯುವಜನತೆ ವಿಶೇಷ ಉಪನ್ಯಾಸ

Suddi Udaya

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ,ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1ಮತ್ತು 2ರ ಆಶ್ರಯದಲ್ಲಿ “ಎನ್ ಎಸ್ ಎಸ್ ಮತ್ತು ಯುವಜನತೆ ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಸೆ. 25 ರಂದುಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಮಡಂತ್ಯಾರು ಗ್ರಾ.ಪಂ ಪಿಡಿಒ ಡಾ. ಪ್ರಕಾಶ್ ಅವರು ಜೀವನದಲ್ಲಿ ಶಿಸ್ತು ಸಂಯಮ , ಸೇವಾ ಮನೋಭಾವನೆಯ ಮಹತ್ವವನ್ನು ದೃಷ್ಟಾಂತಗಳ ಮೂಲಕ ವಿವರಿಸಿದರು. ಉತ್ತಮ ಸ್ವಯಂಸೇವಕ ರಾಷ್ಟ್ರವನ್ನು ಕಟ್ಟಿ ಬೆಳೆಸುವುದರಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದತ್ತು ಗ್ರಾಮ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ದತ್ತು ಗ್ರಾಮವಾದ ಮಡಂತ್ಯಾರ್ ನಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕಾಲೇಜು ಹಾಗೂ ಗ್ರಾಮ ಪಂಚಾಯತ್ ಮಡಂತ್ಯಾರ್ ಇವರ ಸಹಯೋಗದೊಂದಿಗೆ ನಡೆಸಿಕೊಂಡು ಹೋಗಲು ಅನುವಾಗುವಂತೆ ೩ ವರ್ಷಗಳ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ| ಮಾಧವರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಚಾಲಕ ಡಾ. ಅವಿತ ಮರಿಯ ಕ್ವಾಡ್ರಸ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಚಿತ್ರಾ ಪಡಿಯಾರ್ ಮತ್ತು ಪ್ರೊ. ಸಂತೋಷ್ ಪ್ರಭು ಉಪಸ್ಥಿತರಿದ್ದರು. ಕುಮಾರಿ ಶ್ರೀ ಲಕ್ಷ್ಮಿ ಸ್ವಾಗತಿಸಿದರು,ಕುಮಾರಿ ಕವಿತಾ ವಂದಿಸಿದರು, ಕುಮಾರಿ ವರ್ಷಿನಿ ನಿರೂಪಿಸಿದರು,

Leave a Comment

error: Content is protected !!