ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

Suddi Udaya

ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾವ್ ಎಂಬವರ ತೋಟಕ್ಕೆ ಶನಿವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು 60 ಅಡಕೆ ಮರ ಹಾಗೂ ಒಂದು ತೆಂಗಿನ ಮರವನ್ನು ಮುರಿದುಹಾಕಿವೆ.
ಹಿಂಡಿನಲ್ಲಿ ಸುಮಾರು 6 ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದ್ದು ತೋಟದಲ್ಲಿ ಮೂಡಿರುವ ಆನೆಗಳ ಹೆಜ್ಜೆಗಳು ಇದನ್ನು ದೃಢೀಕರಿಸುತ್ತಿವೆ.
ಮಠದ ಮಜಲು ಪರಿಸರದಲ್ಲಿ ಒಂಟಿ ಸಲಗ ಸೇರಿದಂತೆ ಎರಡರಿಂದ ಮೂರು ಆನೆಗಳಿರುವ ಹಿಂಡು ಆಗಾಗ ಕಂಡು ಬರುತ್ತಿದ್ದರೆ ಈ ಬಾರಿ ಏಕಾಏಕಿ ಆರು ಆನೆಗಳು ಕಂಡುಬಂದಿವೆ ಎಂದು ಸ್ಥಳೀಯ ಪ್ರಕಾಶ್ ನಾರಾಯಣ್ ರಾವ್ ತಿಳಿಸಿದ್ದಾರೆ.

Leave a Comment

error: Content is protected !!