24 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

ನಡ: ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರವು ಅ.5ರಂದು ನಡ ಸಮಾಜ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಹಾ.ಉ.ಸ. ಸಂಘದ ಅಧ್ಯಕ್ಷ ಜರ್ನಾದನ ಗೌಡ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ಎಮ್.ಎಫ್ ಉಪವ್ಯವಸ್ಥಾಪಕ ಸತೀಶ್ ರಾವ್, ಕೆ.ಎಮ್.ಎಫ್ ಸಹಾಯಕ ವ್ಯವಸ್ಥಾಪಕ, ಪಶು ವೈದ್ಯಾಧಿಕಾರಿ ಡಾ| ಗಣಪತಿ, ಕೆ.ಎಂ.ಎಫ್ ಕೃಷಿ ಅಧಿಕಾರಿ ಡಾ. ನಿರಂಜನ್, ಕೆ.ಎಮ್.ಎಫ್ ವಿಸ್ತರಣಾಧಿಕಾರಿಯಾದ ಯಮುನ, ಸುಚಿತ್ರಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರದೇಶಕ್ಕೆ ಹೊಂದಿಕೊಳ್ಳುವ ಹಸಿರು ಮೇವಿನ ತಳಿಗಳ ಬಗ್ಗೆ ಹಾಗೂ ಸೈಲೇಜ್ / ರಸ ಮೇವು ಉಪಯೋಗದ ಬಗ್ಗೆ ಮಾಹಿತಿ., ಜಾನುವಾರುಗಳ ಗರ್ಭಧಾರಣೆ ಸಮಸ್ಯೆಯ ಬಗ್ಗೆ, ಜಾನುವಾರುಗಳ ವಿಮೆ (ಇನ್ಶೂರೆನ್ಸ್) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಸಂಘದ ವತಿಯಿಂದ ಹಾಲು ಹಾಕುವ ಸದಸ್ಯರ ಒಂದು ದನಕ್ಕೆ ಉಚಿತವಾಗಿ ವಿಮೆಯನ್ನು ಮಾಡಲಾಯಿತು.

ಸಂಘದಲ್ಲಿ 200ಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಸಂಘದ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಯತೀಶ್ ಗೌಡ ಕಂಗಿತ್ತೀಲು ಸ್ವಾಗತಿಸಿ, ಅಜಿತ್ ಕುಮಾರ್ ಅರಿಗ ಪ್ರಸ್ತಾವಿಕ ಮಾತನಾಡಿದರು., ಜಯಂತ್ ಗೌಡ ಧನ್ಯವಾದವಿತ್ತರು.

Related posts

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ‘ದೆಸಿಲ್ದರತಿ’ ಶಿಶಿಲೇಶ್ವರ ದೇವರ ಭಕ್ತಿಗೀತೆಯ ಚಿತ್ರೀಕರಣ

Suddi Udaya

ನ.4: ಭಜಕ ಸಹೋದರಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ ಕ್ರೀಡಾ ಬೇಸಿಗೆ ಶಿಬಿರಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾಂಗ್ರೇಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆ

Suddi Udaya

ಕಲ್ಮಂಜ : ಬಜಿಲ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ : ಸ್ಥಳಕ್ಕೆ ತಹಶೀಲ್ದಾರ್ ಭೇಟಿ; ವೀಕ್ಷಣೆ

Suddi Udaya
error: Content is protected !!